ಪುತ್ತೂರು: ಕೆಯ್ಯೂರು ನಿವಾಸಿ ಯುವಕನೊಬ್ಬ ಮುಂಬೈನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತರನ್ನು ಕಾರ್ತಿಕ್ (27) ಎಂದು ಗುರುತಿಸಲಾಗಿದೆ. ಅವರು ಉರ್ಲ ಎಂಬಲ್ಲಿ ಹೊಟೇಲ್ ಉದ್ಯೋಗಿಯಾಗಿ, ಅಲ್ಲೇ ವಾಸಿಸುತ್ತಿದ್ದರು. ಮೇ. 21 ರಂದು ಅವರು ತಮ್ಮ ರೂಮ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಕಾರ್ತಿಕ್ ಶವವನ್ನು ಹುಟ್ಟೂರಾದ ಕೈಯೂರಿಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಮೃತರು ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
























