ಪುತ್ತೂರು

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತುರ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ 50 ಲಕ್ಷ ಮಂಜೂರು | ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸೇರಿದಂತೆ ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕುಡಿಯುವ ನೀರಿನ ಅಭಾವ ಉಂಟಾಗಿದ್ದು ,ಸಾರ್ವಜನಿಕರಿಗೆ ತುರ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ ಸಿಎಂ ಸಿದ್ದರಾಮಯ್ಯ ತುರ್ತು ವ್ಯವಸ್ಥೆಗಾಗಿ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದಾರೆ. ಪುತ್ತೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಕುಡಿಯುವ ನೀರಿಗೆ ತೊಂದರೆಯಾಗಿರುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕರು […]

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತುರ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ 50 ಲಕ್ಷ ಮಂಜೂರು | ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ Read More »

ಹೃದಯಾಘಾತದಿಂದ ಹೊಟೇಲ್ ಉದ್ಯಮಿ ಮೃತ್ಯು | ಬೈಕ್ ಚಲಾಯಿಸುತ್ತಿರುವಾಲೇ ನಡೆಯಿತು ಘಟನೆ

ಪುತ್ತೂರು : ಮಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುರಿಯ ನಿವಾಸಿ ಬಾಲಕೃಷ್ಣ ಗೌಡ (49) ಅವರು ಮೇ 3ರಂದು ಹೃದಯಾಘಾತದಿಂದ ನಿಧನರಾದರು. ಬಾಲಕೃಷ್ಣ ಗೌಡ ಅವರು ಬೈಕ್ ಓಡಿಸುತ್ತಿರುವಾಗ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಹೊಟೇಲ್ ಉದ್ಯಮಿ ಮೃತ್ಯು | ಬೈಕ್ ಚಲಾಯಿಸುತ್ತಿರುವಾಲೇ ನಡೆಯಿತು ಘಟನೆ Read More »

ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ ಚಾಲನೆ

ಪುತ್ತೂರು : ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಮತ್ತು ರೋಟರಿ ಕ್ಲಬ್ ಬೀರಮಲೆ ಹಿಲ್ಸ್ ಹಾಗೂ ಲಿಟಲ್ ಫ್ಲವರ್ ಹೈಯರ್ ಪ್ರೈಮರಿ ಸ್ಕೂಲ್ ಜಂಟಿ ಆಶ್ರಯದಲ್ಲಿ 30 ದಿನಗಳ ಕಾಲ ನಡೆಯುವ ಉಚಿತ ಬೇಸಿಗೆ ವಾಲಿಬಾಲ್ ಶಿಬಿರಕ್ಕೆ ಲಿಟ್ಲ್‍ ಫ್ಲವರ್ ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ. ದೀಪ ಬೆಳಗಿಸಿ ಚಾಲನೆ ನೀಡಿ, 10 ವರ್ಷದಿಂದ 18 ವರ್ಷದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ವಾಲಿಬಾಲ್ ತರಬೇತಿಯನ್ನ ನೀಡುವ ಸಂಘಟಕರ ಉದ್ದೇಶ

ಉಚಿತ ವಾಲಿಬಾಲ್ ತರಬೇತಿ ಶಿಬಿರಕ್ಕೆ ಚಾಲನೆ Read More »

ನಮ್ಮೊಳಗಿನ ಮೌಲ್ಯಗಳನ್ನು ಗುರುತಿಸಿಕೊಳ್ಳಿ | ವಿವೇಕಾನಂದ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರೊ ಡಾ. ಎಂ. ಎಸ್ ಮೂಡಿತ್ತಾಯ

ಪುತ್ತೂರು : ವಿದ್ಯಾರ್ಥಿಗಳಲ್ಲಿ ವಿಪುಲವಾದ ಪ್ರತಿಭೆಗಳಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದಾಗಿರುತ್ತದೆ. ಜೊತೆಗೆ ಸ್ವಾಯತ್ತ ವಿದ್ಯಾಸಂಸ್ಥೆಗಳಿಗೆ ಇಂತಹ ಅವಕಾಶಗಳು ಹೇರಳವಾಗಿರುತ್ತದೆ. ಯುವಜನತೆ ಇಂದು ಶಿಕ್ಷಣದತ್ತ ಮುಖಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಏನೇ ಅಡೆತಡೆ ಬಂದರೂ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಮುಂದುವರೆಯಬೇಕು.ಆತ್ಮವಿಶ್ವಾಸ ಒಂದೇ ಯಶಸ್ಸಿನ ಗುಟ್ಟು ಹಾಗೂ ನಮ್ಮ ಜೀವನದ ಯಶಸ್ಸಿಗೆ ಕಾರಣಕರ್ತರಾದವರನ್ನು ನಾವು ಎಂದಿಗೂ ಮರೆಯಬಾರದು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ ಡಾ. ಎಂ. ಎಸ್ ಮೂಡಿತ್ತಾಯ ಹೇಳಿದರು.ವಿವೇಕಾನಂದ ಕಲಾ, ವಿಜ್ಞಾನ

ನಮ್ಮೊಳಗಿನ ಮೌಲ್ಯಗಳನ್ನು ಗುರುತಿಸಿಕೊಳ್ಳಿ | ವಿವೇಕಾನಂದ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರೊ ಡಾ. ಎಂ. ಎಸ್ ಮೂಡಿತ್ತಾಯ Read More »

‘ಇಂಜಿನಿಯರ್ಸ್ ಪ್ರಶಸ್ತಿ’ಗೆ ಪುತ್ತೂರು ಘಟಕದ ಶಿವರಾಮ ಎಮ್.ಎಸ್ ಆಯ್ಕೆ | ಮಹಾರಾಷ್ಟ್ರದ ನಾಸಿಕ್ ಬುದ್ಧ ವಿಹಾರ್ ರಾಡಿಸನ್ ಬ್ಲೂವಿನಲ್ಲಿ ಪ್ರಶಸ್ತಿ ಸ್ವೀಕಾರ

ಪುತ್ತೂರು: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್ ನ ರಾಷ್ಟ್ರೀಯ ಮಟ್ಟದ ಫೌಂಡೇಶನ್ ಕಮ್ ಅವಾರ್ಡ್ಸ್ ಡೇ ಸಮ್ಮೇಳನದಲ್ಲಿ ನಡೆಯುವ ಪ್ರಖ್ಯಾತ “ಇಂಜಿನಿಯರ್ಸ್ ಪ್ರಶಸ್ತಿಗೆ ಇಂಜಿನಿಯರ್ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಘಟಕದ ಸದಸ್ಯ ಪಡೂರು ಮತಾವು ನಿವಾಸಿ ಶಿವರಾಮ್ ಎಮ್.ಎಸ್. ಆಯ್ಕೆಯಾಗಿದ್ದಾರೆ. ಮೇ 4ರಂದು ಮಹಾರಾಷ್ಟ್ರದ ನಾಸಿಕ್ ಬುದ್ಧ ವಿಹಾರ್ ರಾಡಿಸನ್ ಬ್ಲೂವಿನಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರಶಸ್ತಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ವಿಜಯ್ ಸನಪ್ ಅವರಿಂದ ಸ್ವೀಕರಿಸಿದ್ದರು. ಸಮ್ಮೇಳನದಲ್ಲಿ ಭಾರತದ ವಿವಿಧ ಭೌಗೋಳಿಕ

‘ಇಂಜಿನಿಯರ್ಸ್ ಪ್ರಶಸ್ತಿ’ಗೆ ಪುತ್ತೂರು ಘಟಕದ ಶಿವರಾಮ ಎಮ್.ಎಸ್ ಆಯ್ಕೆ | ಮಹಾರಾಷ್ಟ್ರದ ನಾಸಿಕ್ ಬುದ್ಧ ವಿಹಾರ್ ರಾಡಿಸನ್ ಬ್ಲೂವಿನಲ್ಲಿ ಪ್ರಶಸ್ತಿ ಸ್ವೀಕಾರ Read More »

ನಾಳೆ (ಮೇ 5) : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಧನ್ಯೋತ್ಸವ’ ಸಭೆ

ಪುತ್ತೂರು : ತಾಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮುಗಿದು ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ‘ಧನ್ಯೋತ್ಸವ’ ಸಭೆ ಮೇ 5 ಭಾನುವಾರ ಸಂಜೆ 5 ಗಂಟೆಗೆ ಶ್ರೀ ದೇವಸ್ಥಾನದಲ್ಲಿ ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವ ಸಮಿತಿಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಕರಸೇವಕರು, ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಕರಸೇವಕರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ

ನಾಳೆ (ಮೇ 5) : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಧನ್ಯೋತ್ಸವ’ ಸಭೆ Read More »

ದೇವಸ್ಥಾನದ ವಠಾರದಲ್ಲಿರುವ ಹೋರಿ ನಾಪತ್ತೆ | ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುತ್ತಿದ್ದ ಹೋರಿಯೊಂದು ಕಾಣೆಯಾದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಾಧು ಸ್ವಭಾವದ ಈ ಹೋರಿ ಎ.30ರಿಂದ ನಾಪತ್ತೆಯಾಗಿದೆ. ಸಣ್ಣ ಕರುವಾಗಿದ್ದ ಸಂದರ್ಭದಲ್ಲೇ ದೇವಸ್ಥಾನದ ಬಳಿ ಯಾರೋ ಬಿಟ್ಟು ಹೋಗಿದ್ದ ಬಳಿಕ ಅದು ದೇವಸ್ಥಾನದ ವಠಾರದಲ್ಲಿ ಭಕ್ತರು ನೀಡುತ್ತಿದ್ದ ಬಾಳೆ ಹಣ್ಣುಗಳನ್ನು ತಿಂದು ಅಲ್ಲೇ ಸುತ್ತಮುತ್ತ ತಿರುಗಾಡುತ್ತಿದ್ದು, ಈ ಹೋರಿ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು. ಇತ್ತೀಚೆಗೆ ಶೃಂಗೇರಿ ಶ್ರೀಗಳು ಕೂಡಾ ಈ ಹೋರಿಗೆ ತನ್ನಲ್ಲಿದ್ದ ಎಲ್ಲಾ ಹಣ್ಣುಗಳನ್ನು ನೀಡುವ ಮೂಲಕ ಅವರ ಪ್ರೀತಿಗೆ

ದೇವಸ್ಥಾನದ ವಠಾರದಲ್ಲಿರುವ ಹೋರಿ ನಾಪತ್ತೆ | ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read More »

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಿಂದ ಪ್ರಶಸ್ತಿ ಪ್ರದಾನ ಸಮಾರಂಭ | ಕವಿ ಸುಬ್ರಾಯ ಚೊಕ್ಕಾಡಿಯವರಿಗೆ “ಸ್ವರ್ಣ ಸಾಧನಾ ಪ್ರಶಸ್ತಿ” ಪ್ರದಾನ, ಸಾಧಕರಾದ ಎಸ್‍ ಆರ್ ಕೆ ಲ್ಯಾಡರ್ಸ್ ನ ಕೇಶವ ಅಮೈ, ವಿದ್ಯಾರ್ಥಿನಿಯರಾದ ತೇಜಸ್ವಿನಿ ವಿ. ಶೆಟ್ಟಿ, ಸ್ವಾತಿ ಎನ್. ವಿ., ಶಮಾ ಚಂದುಕೊಡ್ಲುರವರಿಗೆ ಅಭಿನಂದನೆ | ಆಪ್ತ ಚಂದ್ರಮತಿ ಮುಳಿಯರಿಗೆ ಗೌರವಾರ್ಪಣೆ

ಪುತ್ತೂರು: ಕವಿತೆ ಎಂಬುದು ಮಾತಿಗೆ ಮೀರಿದ ಅನುಭವ ಕೊಡುವಂತದ್ದು. ಈ ನಿಟ್ಟಿನಲ್ಲಿ ಕವಿ ಮಾತನಾಡಬಾರದು. ಬದಲಾಗಿ ಮಾಡಿ ತೋರಿಸಬೇಕು. ತನ್ನ ಮನಸ್ಸಿನ ಹಂಬಲ ಇತರರ ಹಂಬಲ ಆಗಿರುವುದೇ ನಿಜವಾದ ಬರವಣಿಗೆಯ ಯಶಸ್ಸು. ಹೀಗೆಂದು ಹೇಳಿದರು ಕವಿ, ಲೇಖಕ ಸುಬ್ರಾಯ ಚೊಕ್ಕಾಡಿ. ಅವರು ಶನಿವಾರ ನಗರದ ಜೈನ ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮೂರನೇ ವರ್ಷದ “ಸ್ವರ್ಣ ಸಾಧನಾ ಪ್ರಶಸ್ತಿ” ಪ್ರದಾನ, ಸಾಧಕರಿಗೆ ಅಭಿನಂದನೆ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಿಂದ ಪ್ರಶಸ್ತಿ ಪ್ರದಾನ ಸಮಾರಂಭ | ಕವಿ ಸುಬ್ರಾಯ ಚೊಕ್ಕಾಡಿಯವರಿಗೆ “ಸ್ವರ್ಣ ಸಾಧನಾ ಪ್ರಶಸ್ತಿ” ಪ್ರದಾನ, ಸಾಧಕರಾದ ಎಸ್‍ ಆರ್ ಕೆ ಲ್ಯಾಡರ್ಸ್ ನ ಕೇಶವ ಅಮೈ, ವಿದ್ಯಾರ್ಥಿನಿಯರಾದ ತೇಜಸ್ವಿನಿ ವಿ. ಶೆಟ್ಟಿ, ಸ್ವಾತಿ ಎನ್. ವಿ., ಶಮಾ ಚಂದುಕೊಡ್ಲುರವರಿಗೆ ಅಭಿನಂದನೆ | ಆಪ್ತ ಚಂದ್ರಮತಿ ಮುಳಿಯರಿಗೆ ಗೌರವಾರ್ಪಣೆ Read More »

ಶೀಘ್ರ ವೇತನಕ್ಕೆ ಆಗ್ರಹ : ಅಂಗನವಾಡಿ ಕಾರ್ಯಕರ್ತೆಯರಿಂದ ಶಾಸಕರಿಗೆ ಮನವಿ

ಪುತ್ತೂರು: ಕಳೆದ ಎರಡು ತಿಂಗಳ ವೇತನ ವಿಳಂಬವಾಗಿದ್ದು ಶೀಘ್ರ ವೇತನಕ್ಕೆ ಆಗ್ರಹಿಸಿ ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ವತಿಯಿಂದ ಶಾಸಕರಾದ ಅಶೋಕ್ ರೈ ಅವರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಶಾಸಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ವಾರದೊಳಗೆ ವೇತನ ಪಾವತಿಸುವಂತೆ ಮತ್ತು ವಿಳಂಬವಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷರಾದ ಕಮಲ,ಕಾರ್ಯದರ್ಶಿ ಪುಷ್ಪಲತಾ ,ಖಜಾಂಜಿ ಶೈಲಾಜ, ಉಪಾಧ್ಯಕ್ಷರಾದ ಸಂಧ್ಯ ,ಮಾಜಿ ಜಿಲ್ಲಾಧ್ಯಕ್ಷರಾದ ಅರುಣ.ಡಿ

ಶೀಘ್ರ ವೇತನಕ್ಕೆ ಆಗ್ರಹ : ಅಂಗನವಾಡಿ ಕಾರ್ಯಕರ್ತೆಯರಿಂದ ಶಾಸಕರಿಗೆ ಮನವಿ Read More »

ಇಂದು ಮಹಾರಾಷ್ಟ್ರದ ರಾಡಿಸನ್ ಬ್ಲೂವಿನಲ್ಲಿ ರಾಷ್ಟ್ರೀಯ ಮಟ್ಟದ ಫೌಂಡೇಶನ್ ಕಮ್ ಅವಾರ್ಡ್ಸ್ ಡೇ ಸಮ್ಮೇಳನ | ಪ್ರಖ್ಯಾತ ‘ಇಂಜಿನಿಯರ್ಸ್ ಪ್ರಶಸ್ತಿ’ಗೆ ಪುತ್ತೂರು ಘಟಕದ ಶಿವರಾಮ್ ಎಮ್‍.ಎಸ್‍. ಆಯ್ಕೆ

ಪುತ್ತೂರು: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಭಾರತ) ನ ರಾಷ್ಟ್ರೀಯ ಮಟ್ಟದ ಫೌಂಡೇಶನ್ ಕಮ್ ಅವಾರ್ಡ್ಸ್ ಡೇ ಸಮ್ಮೇಳನದಲ್ಲಿ ನಡೆಯುವ ಪ್ರಖ್ಯಾತ “ಇಂಜಿನಿಯರ್ಸ್ ಪ್ರಶಸ್ತಿಗೆ”ಇಂಜಿನಿಯರ್ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಘಟಕದ ಸದಸ್ಯ ಪಡೂರು ಮತಾವು ನಿವಾಸಿ ಶಿವರಾಮ್ ಎಮ್.ಎಸ್. ಆಯ್ಕೆಯಾಗಿದ್ದಾರೆ. ಮೇ 4ರಂದು ಮಹಾರಾಷ್ಟ್ರದ ನಾಸಿಕ್ ಬುದ್ಧ ವಿಹಾರ್ ರಾಡಿಸನ್ ಬ್ಲೂವಿನಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರಶಸ್ತಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ವಿಜಯ್ ಸನಪ್ ಅವರಿಂದ ಸ್ವೀಕರಿಸಲಿದ್ದಾರೆ. ಸಮ್ಮೇಳನದಲ್ಲಿ ಭಾರತದ ವಿವಿಧ ಭೌಗೋಳಿಕ

ಇಂದು ಮಹಾರಾಷ್ಟ್ರದ ರಾಡಿಸನ್ ಬ್ಲೂವಿನಲ್ಲಿ ರಾಷ್ಟ್ರೀಯ ಮಟ್ಟದ ಫೌಂಡೇಶನ್ ಕಮ್ ಅವಾರ್ಡ್ಸ್ ಡೇ ಸಮ್ಮೇಳನ | ಪ್ರಖ್ಯಾತ ‘ಇಂಜಿನಿಯರ್ಸ್ ಪ್ರಶಸ್ತಿ’ಗೆ ಪುತ್ತೂರು ಘಟಕದ ಶಿವರಾಮ್ ಎಮ್‍.ಎಸ್‍. ಆಯ್ಕೆ Read More »

error: Content is protected !!
Scroll to Top