ಅಪರಾಧ

ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಚಪ್ಪಲಿಯೇಟು ‌ನೀಡಿದ ದಿಟ್ಟ ಮಹಿಳೆ

ರಾಯಚೂರು: ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಮಹಿಳೆಯೊಬ್ಬರು ‌ಚಪ್ಪಲಿಯೇಟು ನೀಡುವ ಮೂಲಕ ಪ್ರತ್ಯುತ್ತರ ನೀಡಿದ ಘಟನೆ ಲಿಂಗಸುಗೂರು ಪಟ್ಟಣದ ಬಸ್ಸು ನಿಲ್ದಾಣದ ಸಮೀಪ ನಡೆದಿದೆ. ಮಹಿಳೆ ಬಸ್ಸಿಗಾಗಿ ‌ಕಾಯುತ್ತಾ ನಿಂತಿದ್ದರು. ಆ ಸಂದರ್ಭದಲ್ಲಿ ಯುವಕನೊಬ್ಬ ಅವರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಗೆಯೇ ಅಶ್ಲೀಲವಾಗಿ ‌ಮಾತನಾಡಿದ್ದಾನೆ. ಯುವಕನ ದುರ್ವರ್ತನೆಗೆ ‌ಮಹಿಳೆ ಕೆನ್ನೆಗೆ ಬಾರಿಸಿದ ಅವರು ಆತನಿಗೆ ಚಪ್ಪಲಿಯೇಟು ಸಹ ನೀಡಿ ತಕ್ಕ ಶಾಸ್ತಿ ‌ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸ್ಥಳೀಯರು ಸಹ ಯುವಕನಿಗೆ ಧರ್ಮದೇಟು ನೀಡಿ ಪಾಠ ಕಲಿಸಿದ್ದಾರೆ. […]

ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಚಪ್ಪಲಿಯೇಟು ‌ನೀಡಿದ ದಿಟ್ಟ ಮಹಿಳೆ Read More »

34 ಕೋಟಿ ರೂ ರಕ್ತನಿಧಿ ಪಾವತಿಯ ಬಳಿಕ ಕೇರಳದ ವ್ಯಕ್ತಿ ಬಿಡುಗಡೆ

ಕೊಲೆ ಆರೋಪದಲ್ಲಿ 20 ವರ್ಷ ರಿಯಾಧ್‌ ಜೈಲಿನಲ್ಲಿದ್ದ ಅಬ್ದುಲ್ ರಹೀಮ್ ಕೋಝಿಕ್ಕೋಡ್: ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದ 20 ವರ್ಷಗಳಿಂದ ಮರಣದಂಡನೆ ಎದುರಿಸುತ್ತಿದ್ದ ಕೇರಳದ ಕೋಝಿಕ್ಕೋಡ್ ಸಮೀಪದ ರಾಮನಟ್ಟುಕರೆಯ ಕೊದಂಪುಳ ನಿವಾಸಿ ಅಬ್ದುಲ್ ರಹೀಮ್ ಸುಮಾರು 34 ಕೋಟಿ ರೂಪಾಯಿ ರಕ್ತನಿಧಿ (ಬ್ಲಡ್ ಮನಿ) ಪಾವತಿಸಿದ ನಂತರ ಬಿಡುಗಡೆಯಾಗಿ ಈದ್ ಹಬ್ಬದ ದಿನದಂದು ತಮ್ಮ ಸ್ವಗೃಹಕ್ಕೆ ಮರಳಿದ್ದಾರೆ. ವೃತ್ತಿಯಲ್ಲಿ ಚಾಲಕರಾಗಿದ್ದ ರಹೀಮ್ ಸೌದಿಗೆ ಹೋದ ಕೇವಲ ಒಂದು ತಿಂಗಳ ಒಳಗಾಗಿ ತಮ್ಮ ಮಾಲೀಕನ ಮಗನ ಜೀವ ರಕ್ಷಕ

34 ಕೋಟಿ ರೂ ರಕ್ತನಿಧಿ ಪಾವತಿಯ ಬಳಿಕ ಕೇರಳದ ವ್ಯಕ್ತಿ ಬಿಡುಗಡೆ Read More »

ಜಮೀನಿಗಾಗಿ ನಡೆದ ರಕ್ತದೋಕುಳಿ : ಆರು ಜನರ ಬರ್ಬರ ಹತ್ಯೆ

ಹೊಲದಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಗುಂಡಿಕ್ಕಿ ಸಾಯಿಸಿದ ದುಷ್ಕರ್ಮಿಗಳು ವಿಜಯಪುರ : ಆಸ್ತಿ ವಿವಾದ ಹಿನ್ನೆಲೆ 6 ಜನರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಚಂದು ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ರಾಹುಲ್ ನಿರಾಳೆ, ಸಮರ್ಥ ನಿರಾಳೆ, ಶಬ್ಬೀರ್ ನದಾಫ್ ಸೇರಿದಂತೆ 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಜಮೀನು ವಿಚಾರವಾಗಿ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ‌ ನಿರಾಳೆ ಕುಟುಂಬದ

ಜಮೀನಿಗಾಗಿ ನಡೆದ ರಕ್ತದೋಕುಳಿ : ಆರು ಜನರ ಬರ್ಬರ ಹತ್ಯೆ Read More »

ಸಾಲ ವಾಪಸ್ ಕೇಳಿದ್ದಕ್ಕೆ ಯುವಕನ ಅಪಹರಣ, ಹಲ್ಲೆ

ಪುತ್ತೂರು: ಕಾಸರಗೋಡಿನಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಬೆಳೇತಂಗಡಿಯ ತೆಕ್ಕಾರಿನ ಯುವಕನನ್ನು ಪರಿಚಯಸ್ಥ ಮೂವರು ಅಪಹರಿಸಿ, ರಿಕ್ಷಾದಲ್ಲಿ ‌ಕರೆದೊಯ್ದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆಗೊಳಗಾದವರನ್ನು ಮಹಮ್ಮದ್ ಇರ್ಷಾದ್ ಎಂದು ಗುರುತಿಸಲಾಗಿದೆ. ಮೇ 25 ರಂದು ಕೆದಿಲದ ಗಡಿಯಾರದಲ್ಲಿ ‌ತಮ್ಮ ಭಾವನಿಗೆ ‌ಸ್ಕೂಟರ್ ನೀಡುವ ಸಲುವಾಗಿ ಕಾಯುತ್ತಿದ್ದಾಗ ಪರಿಚಯದವರೇ ಆದ ಆಸಿಫ್, ಶಾಕಿರ್ ಮತ್ತು ಆಸೀಫ್ ಎಂಬವರು ತನ್ನನ್ನು ಅಪಹರಿಸಿ ರಿಕ್ಷಾದಲ್ಲಿ ‌ಹಾಕಿಕೊಂಡು ಸಜೀಪ ಎಂಬಲ್ಲಿ ಗುಡ್ಡವೊಂದಕ್ಕೆ ‌ಕರೆದೊಯ್ದು ಹಲ್ಲೆ‌ ನಡೆಸಿದ್ದಾರೆ. ಮೇ 26 ರ ವರೆಗೆ ಗುಡ್ಡದಲ್ಲೇ

ಸಾಲ ವಾಪಸ್ ಕೇಳಿದ್ದಕ್ಕೆ ಯುವಕನ ಅಪಹರಣ, ಹಲ್ಲೆ Read More »

ಅನೇಕ ಪ್ರಪ್ರಕರಣಗಳಲ್ಲಿ ಪೋಲಿಸರಿಗೆ ಬೇಕಾಗಿದ್ದ ಆರೋಪಿ ಮಹಮ್ಮದ್ ಅಶ್ರಫ್‌ನ ಬಂಧನ

ಮಂಗಳೂರು: ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದ ಹಾಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಮಂಗಳೂರು ದಕ್ಷಿಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಅಜಿಲಮೊಗರುವಿನ ಮಾವಿನಕಟ್ಟೆ ‌ನಿವಾಸಿ ಮಹಮ್ಮದ್ ಅಶ್ರಫ್ ಯಾನೆ ಅಜ್ಜು ಯಾನೆ ಸಮೀರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಔಪಚಾರಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಅಶ್ರಫ್ ‌ವಿರುದ್ಧ ಸುರತ್ಕಲ್, ಬಂಟ್ವಾಳ, ಪಾಂಡೇಶ್ವರ, ಪುತ್ತೂರು, ಉಪ್ಪಿನಂಗಡಿ ಸೇರಿದಂತೆ ಹಲವು ಠಾಣೆಗಳಲ್ಲಿ ದರೋಡೆ, ಕಳ್ಳತನ ಸೇರಿದಂತೆ ಹಲವಾರು ಪ್ರಕರಣ ದಾಖಲಾಗಿದೆ.

ಅನೇಕ ಪ್ರಪ್ರಕರಣಗಳಲ್ಲಿ ಪೋಲಿಸರಿಗೆ ಬೇಕಾಗಿದ್ದ ಆರೋಪಿ ಮಹಮ್ಮದ್ ಅಶ್ರಫ್‌ನ ಬಂಧನ Read More »

ನಿಷೇದಿತ ಡ್ರಗ್ಸ್‌ ಸಾಗಾಟ: ಆರೋಪಿಗಳ ಬಂಧನ

ಬೆಳ್ತಂಗಡಿ: ನಿಷೇಧಿತ ಡ್ರಗ್ಸ್ MDMA ಯನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ವೇಣೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳನ್ನು ಮಿಜಾರಿನ ಮಹಮ್ಮದ್ ತಹ್ನವೀರ್ ಮತ್ತು ಮೂಡುಬಿದ್ರೆಯ ಮಹಮ್ಮದ್ ಸಫ್ವಾನ್ ಎಂದು ಗುರುತಿಸಲಾಗಿದೆ. ವೇಣೂರು ಪೊಲೀಸ್ ಅಧಿಕಾರಿಗಳಿಗೆ ಸಿಕ್ಕ ಖಚಿತ ಮಾಹಿತಿಯನ್ನು ಆಧರಿಸಿ ಮೂಡುಬಿದಿರೆ ಮತ್ತು ಗುರುವಾಯನಕೆರೆಯ ಕಂಬಳದಡ್ಡ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಪ್ರಕರಣ ಪತ್ತೆಯಾಗಿದೆ. ಆರೋಪಿಗಳಿಂದ ಅಂದಾಜು ₹39,200 ಮೌಲ್ಯದ ಸುಮಾರು 3.92 ಗ್ರಾಂ ತೂಕದ MDMA ಮಾದಕವಸ್ತು

ನಿಷೇದಿತ ಡ್ರಗ್ಸ್‌ ಸಾಗಾಟ: ಆರೋಪಿಗಳ ಬಂಧನ Read More »

ಅಕ್ರಮ ಗೋಹತ್ಯೆ : ಇಬ್ಬರ ಬಂಧನ, ಆರು ಜಾನುವಾರು ರಕ್ಷಣೆ

ಬಂಟ್ವಾಳ : ಬಂಟ್ವಾಳ ಪಟ್ಟಣ ಪೊಲೀಸರು ಸಜಿಪಮೂಡ ಗ್ರಾಮದ ಪಂಜಾಜೆಯಲ್ಲಿ ಅಕ್ರಮ ಗೋಹತ್ಯೆ ಜಾಲವನ್ನು ಭೇದಿಸಿ, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಆರು ಜೀವಂತ ದನಗಳು, ಗೋಮಾಂಸ, ಒಂದು ಕಾರು ಮತ್ತು ಕೃತ್ಯಕ್ಕೆ ಬಳಸಿದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಟ್ವಾಳ ಸಜಿಪಮೂಡ ನಿವಾಸಿ ಮುಸ್ತಾಪ (33) ಹಾಗೂ ಬಂಟ್ವಾಳ ಬಿ ಕಸಬಾ ನಿವಾಸಿ ಮಹಮ್ಮದ್‌ ಸಾದೀಕ್‌ (30) ಎಂದು ಗುರುತಿಸಲಾಗಿದೆ. ಬಂಟ್ವಾಳ ಪಟ್ಟಣ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಂದೀಪ್ ಕುಮಾರ್ ಶೆಟ್ಟಿಗಾರ್ ಅವರಿಗೆ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿರುವ ಬಗ್ಗೆ

ಅಕ್ರಮ ಗೋಹತ್ಯೆ : ಇಬ್ಬರ ಬಂಧನ, ಆರು ಜಾನುವಾರು ರಕ್ಷಣೆ Read More »

ಗಿರ್‌ ವನ್ಯಧಾಮದಲ್ಲಿ 7 ಸಿಂಹಗಳ ನಿಗೂಢ ಸಾವು

ವೈರಸ್‌ ಸೋಂಕಿನ ಶಂಕೆಯಲ್ಲಿ 7 ಸಿಂಹಗಳು ಕ್ವಾರಂಟೈನ್‌ ಗಾಂಧಿನಗರ: ಏಷ್ಯಾಟಿಕ್‌ ಸಿಂಹಗಳ ಆವಾಸಸ್ಥಾನವೆಂದೇ ಖ್ಯಾತಿ ಪಡೆದಿರುವ ಗಿರ್‌ ಅರಣ್ಯ ಪ್ರದೇಶದಲ್ಲಿ 7 ಸಿಂಹಗಳ ಸರಣಿ ಸಾವು ಸಂಭವಿಸಿದೆ. ಗುಜರಾತ್‌ನ ಗಿರ್‌ ಕಾಡಿನಲ್ಲಿ ಸಿಂಹಗಳ ನಿರಂತರ ಸಾವು ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದಲ್ಲಿ ಭಾರಿ ಕಳವಳ ಹುಟ್ಟುಹಾಕಿದೆ. ಕಳೆದ ಕೆಲ ದಿನಗಳಲ್ಲಿ 7 ಸಿಂಹಗಳು ಸಾವನ್ನಪ್ಪಿದ್ದು, ನಿಗೂಢ ವೈರಸ್‌ನ ಆತಂಕ ಎದುರಾಗಿದೆ. ಇದರಿಂದಾಗಿ ಸಾವನ್ನಪ್ಪಿದ ಅರಣ್ಯ ವ್ಯಾಪ್ತಿಯಲ್ಲಿರುವ 17 ಸಿಂಹಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ ಪೈಕಿ 8

ಗಿರ್‌ ವನ್ಯಧಾಮದಲ್ಲಿ 7 ಸಿಂಹಗಳ ನಿಗೂಢ ಸಾವು Read More »

ಧರ್ಮಸ್ಥಳ : ವೃದ್ಧೆಯ 10 ಲ.ರೂ. ಮೌಲ್ಯದ ಬಂಗಾರ ಕಳ್ಳತನ

ದೇವಸ್ಥಾನಕ್ಕೆ ಬಂದ ಮಹಿಳೆಗೆ ಅಮಲು ಬರಿಸುವ ಲಡ್ಡು, ಜ್ಯೂಸ್‌ ನೀಡಿ ಚಿನ್ನ ಎಗರಿಸಿದ ಖದೀಮ ಬೆಳ್ತಂಗಡಿ : ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ವೃದ್ದೆಗೆ ಮತ್ತು ಬರುವ ಲಡ್ಡು ಮತ್ತು ಜ್ಯೂಸ್ ನೀಡಿ ಅಸ್ವಸ್ಥರನ್ನಾಗಿಸಿ ಹತ್ತು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಜೆ.ಪಿ.ನಗರ ನಿವಾಸಿಯಾಗಿರುವ ಪ್ರೇಮಾ ಕೆ (70) ಎಂಬವರು ಮೇ 23ರಂದು ಬೆಂಗಳೂರಿನಿಂದ ಉಡುಪಿಯ ಬ್ರಹ್ಮಾವರದಲ್ಲಿರುವ ತನ್ನ ಚಿಕ್ಕಮ್ಮನ ಮಗಳ ಮನೆಗೆ

ಧರ್ಮಸ್ಥಳ : ವೃದ್ಧೆಯ 10 ಲ.ರೂ. ಮೌಲ್ಯದ ಬಂಗಾರ ಕಳ್ಳತನ Read More »

ಟಿಎಂಸಿ ಕಚೇರಿ ಬಳಿ ಭೂಮಿಯಡಿಯಲ್ಲಿ ಹೂತಿಟ್ಟಿದ್ದ ಕೋಟ್ಯಂತರ ರೂಪಾಯಿ ವಶ

ಪ್ಲಾಸ್ಟಿಕ್‌ ಚೀಲ, ಬ್ಯಾಗ್‌ಗಳಲ್ಲಿ 500 ರೂ. ನೋಟುಗಳನ್ನು ತುಂಬಿ ಹೂತಿಟ್ಟಿದ್ದರು ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬದುರಿಯಾದಲ್ಲಿ ಬುಧವಾರ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಭೂಮಿಯಡಿಯಲ್ಲಿ ಹೂತಿಡಲಾಗಿದ್ದ 500 ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳಿಂದ ತುಂಬಿದ್ದ ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬದುರಿಯಾ ಪುರಸಭೆಯ ಅಧ್ಯಕ್ಷ ದೀಪಂಕರ್ ಭಟ್ಟಾಚಾರ್ಯ ಅವರನ್ನು ಸರ್ಕಾರದ ಪರಿಹಾರ ಸಾಮಗ್ರಿ ದುರುಪಯೋಗ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬಂಧಿಸಿದ ನಂತರ, ಪೊಲೀಸರಿಗೆ ಸಿಕ್ಕ ಖಚಿತ

ಟಿಎಂಸಿ ಕಚೇರಿ ಬಳಿ ಭೂಮಿಯಡಿಯಲ್ಲಿ ಹೂತಿಟ್ಟಿದ್ದ ಕೋಟ್ಯಂತರ ರೂಪಾಯಿ ವಶ Read More »

error: Content is protected !!
Scroll to Top