ಸ್ಥಳೀಯ ಸುದ್ದಿ

ಬೆಟ್ಟಂಪಾಡಿಯಲ್ಲಿ ಯಕ್ಷಗಾನ ಉಚಿತ ತರಬೇತಿ ತರಗತಿ ಉದ್ಘಾಟನೆ

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಉಚಿತ ಯಕ್ಷಗಾನ ತರಬೇತಿ ತರಗತಿ ನ. 12ರಂದು ಆರಂಭಗೊಂಡಿತು. ಯಕ್ಷಗಾನ ಗುರು ಶಶಿಕಿರಣ್ ಕಾವು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ರಾಧಕೃಷ್ಣ ನಾಯಕ್, ಕಾರ್ಯದರ್ಶಿ ಭಾಸ್ಕರ್ ಎಂ.ಎಸ್, ಮಂಜುನಾಥೇಶ್ವರ ಭಜನಾ ಮಂಡಳಿ ಗೌರವಾಧ್ಯಕ್ಷ ನಾರಾಯಣ ಬೆಟ್ಟಂಪಾಡಿ, ಭಜನಾ ಮಂಡಳಿಯ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ, ಸನತ್ ಬರಮೇಲು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಗುರು ಶಶಿಕುಮಾರ್ ಕಾವು ಅವರು ತರಬೇತಿ ಕಾರ್ಯಾಗಾರ ನಡೆಸಿದರು. […]

ಬೆಟ್ಟಂಪಾಡಿಯಲ್ಲಿ ಯಕ್ಷಗಾನ ಉಚಿತ ತರಬೇತಿ ತರಗತಿ ಉದ್ಘಾಟನೆ Read More »

ತಲವಾರು ಝಳಪಿಸಿದ 9 ಮಂದಿ ಪೊಲೀಸ್ ವಶಕ್ಕೆ!!!

ಪುತ್ತೂರು: ಪುತ್ತಿಲ ಪರಿವಾರದ ಕಚೇರಿ ಮುಂಭಾಗ ತಲವಾರು ಝಳಪಿಸಿದ ಪ್ರಕರಣದಲ್ಲಿ 9 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ‌‌ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ

ತಲವಾರು ಝಳಪಿಸಿದ 9 ಮಂದಿ ಪೊಲೀಸ್ ವಶಕ್ಕೆ!!! Read More »

ಬಾಯ್ದೆರೆದ ಅಪಾಯಕ್ಕೆ ತಾತ್ಕಾಲಿಕ ತಡೆ! | ಶಾಶ್ವತ ಪರಿಹಾರದ ಭರವಸೆ ನೀಡಿದ ಪಿಡಬ್ಲ್ಯೂಡಿ ಎಇಇ | ನ್ಯೂಸ್ ಪುತ್ತೂರು ವರದಿಗೆ ಕ್ಷಿಪ್ರ ಸ್ಪಂದನೆ | ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿ ಎದುರಾಗಿದ್ದ ಅಪಾಯ!!

ಪುತ್ತೂರು: ಪುತ್ತೂರು – ಉಪ್ಪಿನಂಗಡಿ ಮುಖ್ಯರಸ್ತೆಯಿಂದ ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿಯೇ ಚರಂಡಿಯೊಂದು ಬಾಯ್ದೆರೆದು ನಿಂತಿದ್ದು, ಲೋಕೋಪಯೋಗಿ ಇಲಾಖೆ ತಾತ್ಕಾಲಿಕ ತಡೆ ನಿರ್ಮಿಸಿದೆ. ಮುಖ್ಯರಸ್ತೆಯಲ್ಲೇ ಬಾಯ್ದೆರೆದು ನಿಂತಿದ್ದ ಅಪಾಯದ ಬಗ್ಗೆ ‘ನ್ಯೂಸ್ ಪುತ್ತೂರು’ ಅಕ್ಟೋಬರ್ 5ರಂದು ವರದಿ ಮಾಡಿತ್ತು. ವರದಿಗೆ ತಕ್ಷಣ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ತನ್ನ ಸಿಬ್ಬಂದಿಗಳ ಮೂಲಕ ತಾತ್ಕಾಲಿಕ ತಡೆ ಬೇಲಿ ನಿರ್ಮಿಸಿದೆ. ಮಾತ್ರವಲ್ಲ, ಮುರಿದು ಹೋಗಿದ್ದ ಚರಂಡಿಯ ಭಾಗಕ್ಕೆ ಮರಳು ತುಂಬಿದ್ದ ಚೀಲಗಳನ್ನಿಡಲಾಗಿದೆ. ಇದರಿಂದ ವಾಹನಗಳು ಸಂಚರಿಸುವಾಗ ರಸ್ತೆ ಬದಿಗೆ ಬಂದರೂ, ಯಾವುದೇ

ಬಾಯ್ದೆರೆದ ಅಪಾಯಕ್ಕೆ ತಾತ್ಕಾಲಿಕ ತಡೆ! | ಶಾಶ್ವತ ಪರಿಹಾರದ ಭರವಸೆ ನೀಡಿದ ಪಿಡಬ್ಲ್ಯೂಡಿ ಎಇಇ | ನ್ಯೂಸ್ ಪುತ್ತೂರು ವರದಿಗೆ ಕ್ಷಿಪ್ರ ಸ್ಪಂದನೆ | ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿ ಎದುರಾಗಿದ್ದ ಅಪಾಯ!! Read More »

ತ್ಯಾಜ್ಯ ಎಸೆಯುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮ ಪಂಚಾಯತ್! | ದಂಡ ಮಾತ್ರವಲ್ಲ, ತಕ್ಕ ಶಾಸ್ತಿಯೂ ಆಯಿತು

ಮಾಣಿ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವಾಹನವನ್ನು ತಡೆದು, ದಂಡ ವಿಧಿಸಿದ ಘಟನೆ ಮಾಣಿಯಲ್ಲಿ ನಡೆದಿದೆ. ಸ್ವಚ್ಛತೆ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಮಾಡಿದರೂ, ಸಂದೇಶ ನೀಡಿದರೂ ತಲೆಕೆಡಿಸಿಕೊಳ್ಳದ ನಾಗರಿಕರಿಗೆ ಇದೀಗ ದಂಡ ವಿಧಿಸಲು ಗ್ರಾಮ ಪಂಚಾಯತ್ ಮುಂದಾಗಿದೆ. ಲಾರಿವೊಂದರಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮ ಪಂಚಾಯತ್, ದಂಡ ವಿಧಿಸಿದೆ. ಮಾತ್ರವಲ್ಲ, ಎಸೆದ ತ್ಯಾಜ್ಯವನ್ನು ಅದೇ ಲಾರಿಯಲ್ಲಿ ತುಂಬಿಸಿ ವಾಪಾಸ್ ಕಳಿಸಲಾಗಿದೆ.

ತ್ಯಾಜ್ಯ ಎಸೆಯುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮ ಪಂಚಾಯತ್! | ದಂಡ ಮಾತ್ರವಲ್ಲ, ತಕ್ಕ ಶಾಸ್ತಿಯೂ ಆಯಿತು Read More »

ಗಾಂಧಿ ಕಟ್ಟೆ ಬಳಿಯ ಹೊಂಡ – ಗುಂಡಿ ರಸ್ತೆಯ ದುಸ್ಥಿತಿ | ತೇಪೆ ಹಾಕಿದ ಎರಡೇ ದಿನದಲ್ಲಿ ಮತ್ತೆ ಹೊಂಡ – ಗುಂಡಿ ಪ್ರತ್ಯಕ್ಷ | ರಸ್ತೆ ದುಸ್ಥಿತಿಗೆ ಯಾರನ್ನು ಹಳಿಯಲಿ ಎನ್ನುವಂತಿದೆ ಗಾಂಧಿ ತಾತನ ಮೌನ!!

ಪುತ್ತೂರು: ಅದೇಗೊ ಬಹಳ ಪ್ರಯಾಸಪಟ್ಟು ಐತಿಹಾಸಿಕ ಪ್ರಾಧಾನ್ಯತೆಯ ಗಾಂಧಿ ಕಟ್ಟೆ ಉತ್ತಮವಾಗಿ ಮೂಡಿಬಂತು. ಆದರೆ ಗಾಂಧಿಕಟ್ಟೆಯ ಬಳಿಯಲ್ಲೇ ಇರುವ ರಸ್ತೆ ಜಪ್ಪಯ್ಯ ಅಂದರೂ ಸರಿಯಾಗಲು ಕೇಳುತ್ತಿಲ್ಲ. ಇದು ಒಂದೆರಡು ದಿನದ ಕಥೆಯಲ್ಲ. ಕಳೆದ ಹಲವು ದಿನಗಳಿಂದ ವಾಹನ ಸವಾರರು, ಇದೇ ಹೊಂಡ – ಗುಂಡಿಯ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ಸಾಗುತ್ತಿದ್ದಾರೆ. ಆದರೂ ಯಾರೊಬ್ಬರೂ ಈ ರಸ್ತೆ ದುಸ್ಥಿತಿಯ ಬಗ್ಗೆ ಚಕಾರ ಎತ್ತುವಂತೆ ಕಾಣಿಸುತ್ತಿಲ್ಲ. ಪುತ್ತೂರು ಪೇಟೆಯ ಸಂಚಾರ ದಟ್ಟಣೆಗೆ ಇದು ಒಂದು ಕಾರಣ. ವಾಹನಗಳು ಹೊಂಡ ಗುಂಡಿಯನ್ನು

ಗಾಂಧಿ ಕಟ್ಟೆ ಬಳಿಯ ಹೊಂಡ – ಗುಂಡಿ ರಸ್ತೆಯ ದುಸ್ಥಿತಿ | ತೇಪೆ ಹಾಕಿದ ಎರಡೇ ದಿನದಲ್ಲಿ ಮತ್ತೆ ಹೊಂಡ – ಗುಂಡಿ ಪ್ರತ್ಯಕ್ಷ | ರಸ್ತೆ ದುಸ್ಥಿತಿಗೆ ಯಾರನ್ನು ಹಳಿಯಲಿ ಎನ್ನುವಂತಿದೆ ಗಾಂಧಿ ತಾತನ ಮೌನ!! Read More »

ಸುಲಲಿತವಾಗಿ ಇಂಗ್ಲೀಷ್ ಮಾತನಾಡಬೇಕೇ? ಪ್ರೇರಣಾದಲ್ಲಿ ಶೀಘ್ರ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ

ಪುತ್ತೂರು: ಸುಲಭವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲವರಾಗಿದ್ದರೆ ಮಾತ್ರ ಪೈಪೋಟಿಯ ಪ್ರಪಂಚದಲ್ಲಿ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯ ಹೊಸ ಬ್ಯಾಚ್ ಅನ್ನು ಆರಂಭಿಸಲಾಗುತ್ತಿದೆ. ಸುಲಲಿತವಾಗಿ ಇಂಗ್ಲೀಷ್ ಬಲ್ಲವರಾಗಿದ್ದರೆ, ಪ್ರಪಂಚದ ಯಾವುದೇ ಮೂಲೆಗಾದರೂ ಹೋಗಿ ವ್ಯವಹರಿಸಬಹುದು. ಆದರೆ ಗ್ರಾಮೀಣ ಭಾಗದವರಿಗೆ ಇಂಗ್ಲೀಷ್ ಎಂದರೆ ತುಸು ಕಷ್ಟವೇ. ಇಂತಹ ಮನಸ್ಥಿತಿಯನ್ನು ದೂರಮಾಡಿ, ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಹೇಗೆ ಮಾತನಾಡಬಹುದು ಎನ್ನುವುದನ್ನು ಪ್ರೇರಣಾದಲ್ಲಿ ನುರಿತ ಶಿಕ್ಷಕರು ಹೇಳಿಕೊಡಲಿದ್ದಾರೆ. ಆಧುನಿಕ ಜಗತ್ತಿನ ಸ್ಪರ್ಧೆಗೆ ಸರಿಯಾಗಿ

ಸುಲಲಿತವಾಗಿ ಇಂಗ್ಲೀಷ್ ಮಾತನಾಡಬೇಕೇ? ಪ್ರೇರಣಾದಲ್ಲಿ ಶೀಘ್ರ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ Read More »

ಸಿ.ಎ.ಬ್ಯಾಂಕ್ ಗೋದಾಮು ಕಟ್ಟಡ ಉದ್ಘಾಟನೆ|ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿ: ಭಾಗೀರಥಿ ಮುರುಳ್ಯ

ಕಡಬ: ರೈತರ ದೈನಂದಿನ ಅಗತ್ಯಗಳಿಗೆ ಪೂರಕವಾಗಿ ಸ್ಪಂದಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿಯಾಗಿದೆ ಎಂದು ಸುಳ್ಯ ವಿಧಾನಸಭಾ  ಕ್ಷೇತ್ರದ ಶಾಸಕಿ  ಭಾಗೀರಥಿ ಮುರುಳ್ಯ ಹೇಳಿದರು. ಅವರು ಶನಿವಾರ  ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮರ್ದಾಳ ಶಾಖಾ ಕಚೇರಿಯ ಆವರಣದಲ್ಲಿ  ನಬಾರ್ಡ್ ನೆರವಿನೊಂದಿಗೆ 60 ಲಕ್ಷ ರೂ. ವೆಚ್ಚದಲ್ಲಿ  ನೂತನವಾಗಿ ನಿರ್ಮಾಣಗೊಂಡಿರುವ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.  ರೈತರಿಗೆ ಸಹಕಾರಿ ಸಂಘಗಳ ಸವಲತ್ತುಗಳು  ಸರಕಾರದ ಯೋಜನೆಗಳಿಗಿಂತಲೂ ಹೆಚ್ಚು  ಪ್ರಯೋಜನಕಾರಿಯಾಗಿವೆ.

ಸಿ.ಎ.ಬ್ಯಾಂಕ್ ಗೋದಾಮು ಕಟ್ಟಡ ಉದ್ಘಾಟನೆ|ಸಹಕಾರಿ ಸಂಘಗಳು ಗ್ರಾಮೀಣ ರೈತರ ಬದುಕಿನ ಜೀವನಾಡಿ: ಭಾಗೀರಥಿ ಮುರುಳ್ಯ Read More »

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳ ತರಗತಿ ಪ್ರವೇಶೋತ್ಸವ

ಪುತ್ತೂರು: ಇಲ್ಲಿನ ಕೃಷ್ಣನಗರ ಅಲಂಬುಡದಲ್ಲಿ ನೂತನವಾಗಿ ಆರಂಭಗೊಂಡಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಜೂನ್ 5ರಂದು ನಡೆಯಿತು. ತಾಳ್ಮೆಯಿಂದ ಮಕ್ಕಳನ್ನು ಬೆಳೆಸಬೇಕು: ಡಾ. ಸುಕುಮಾರ್ ಗೌಡ,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ. ಸುಕುಮಾರ್ ಗೌಡ, ಮಕ್ಕಳನ್ನು ತಾಳ್ಮೆಯಿಂದ ಬೆಳೆಸಿ. ಆಗ ಮಕ್ಕಳು ಬೆಳೆಯುತ್ತಾರೆ ಎಂದ ಅವರು, ವಿದ್ಯಾಸಂಸ್ಥೆಯ ಸುತ್ತಲಿನ ಕಾಡನ್ನು ಇದೇ ರೀತಿ ಉಳಿಸುಕೊಳ್ಳಿ ಎಂದು‌ ಕಿವಿಮಾತು ಹೇಳಿದರು.ಶಿಕ್ಷಣ ತಜ್ಞ ಎನಿಸಿಕೊಳ್ಳಲು ಕಾಳಜಿ ಇರಬೇಕು. ಆ ಕಾಳಜಿ

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳ ತರಗತಿ ಪ್ರವೇಶೋತ್ಸವ Read More »

ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿವಾಗದ 94ಸಿ ಕಡತ! ಪ್ರಶ್ನಿಸಿದ ಪತ್ರಕರ್ತನಿಗೆ ದಬಾಯಿಸಿದ ತಾಲೂಕು ಕಛೇರಿ ಸಿಬ್ಬಂದಿ

ಕಡಬ: ಕಡಬ ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ ಉಳಿದ 94 ಸಿ ಕಡತದ ಬಗ್ಗೆ ವಿಚಾರಿಸಲು ತೆರಳಿದ ಪತ್ರಕರ್ತರಿಗೆ ಕಡತ ವಿಲೇವಾರಿ ಸಿಬಂದಿ ಅನುಚಿತವಾಗಿ ವರ್ತಿಸಿದ ಅರೋಪ ವ್ಯಕ್ತವಾಗಿದೆ.  ಕಳೆದ 5 ತಿಂಗಳ ಹಿಂದೆ ಸುಬ್ರಹ್ಮಣ್ಯದ ಮಹಿಳೆಯೋರ್ವರು 94 ಸಿ ಅರ್ಜಿ ಸಲ್ಲಿಸಿದ್ದರು.  ಬಳಿಕ ಕುಂಟುತ್ತಾ ಸಾಗುತ್ತಾ ವಿಲೇವಾರಿಯಾಗಲಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಗ್ರಾಮದ ಕಡತ ವಿಲೇವಾರಿ ಮಾಡುವ ಸಿಬ್ಬಂದಿ ಬಳಿ ತೆರಳಿ  ಕಡಬದ ಪತ್ರಕರ್ತರೋರ್ವರು  ವಿಚಾರಿಸುವ  ವೇಳೆ  ಪತ್ರಕರ್ತ ಎಂದು ಪರಿಚಯಿಸಿಕೊಂಡಿದ್ದಾರೆ. ಪತ್ರಕರ್ತರು ಎಂದು ಪರಿಚಯಿಸಿಕೊಂಡು ಇಲ್ಲಿಗೆ

ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿವಾಗದ 94ಸಿ ಕಡತ! ಪ್ರಶ್ನಿಸಿದ ಪತ್ರಕರ್ತನಿಗೆ ದಬಾಯಿಸಿದ ತಾಲೂಕು ಕಛೇರಿ ಸಿಬ್ಬಂದಿ Read More »

ರಸ್ತೆ ಬದಿ ನೀರು ಹೋಗುವ ಚರಂಡಿ ನಾಪತ್ತೆ | ಜೆ.ಜೆ.ಎಂ. ಯೋಜನೆಯ ಪೈಪ್ ಲೈನ್ ಅಳವಡಿಕೆ ವೇಳೆ ಘಟನೆ

ನಿಡ್ಪಳ್ಳಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯು ಒಂದು. ಮನೆ ಮನೆಗೆ ಕುಡಿಯುವ ನೀರು ಪೂರೈಕೆಗಾಗಿ ಇರುವ ಈ ಯೋಜನೆಯಿಂದ ನಿಡ್ಪಳ್ಳಿ ಗ್ರಾಮದಲ್ಲಿ ಕೊಳವೆ ಬಾವಿ ಕೊರೆದು‌ ಟ್ಯಾಂಕ್ ನಿರ್ಮಾಣ ನಡೆದಿದೆ. ಇದೀಗ ಕಾಮಗಾರಿ ಮುಂದುವರಿದು ರಸ್ತೆ ಬದಿಯಲ್ಲಿ ಪೈಪು ಅಳವಡಿಕೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಹೆಚ್ಚಿನ ಕಡೆ ರಸ್ತೆ ಬದಿಯ ಚರಂಡಿ ಮೂಲಕವೇ ಗುಂಡಿ ತೆಗೆದು ಪೈಪು ಆಳವಡಿಸಲಾಗುತ್ತಿದೆ. ಆದರೆ ಪೈಪ್ ಅಳವಡಿಸಿದ ನಂತರ ಮೊದಲಿದ್ದ ಚರಂಡಿ ನಾಪತ್ತೆ. ನಿಡ್ಪಳ್ಳಿ ಗ್ರಾಮದ ಕೊಪ್ಪಳ

ರಸ್ತೆ ಬದಿ ನೀರು ಹೋಗುವ ಚರಂಡಿ ನಾಪತ್ತೆ | ಜೆ.ಜೆ.ಎಂ. ಯೋಜನೆಯ ಪೈಪ್ ಲೈನ್ ಅಳವಡಿಕೆ ವೇಳೆ ಘಟನೆ Read More »

error: Content is protected !!
Scroll to Top