‘ಬಿಜೆಪಿ ಸೇರಲು ಲಕ್ಷ್ಮಣ್ ಸವದಿ ಪ್ರಯತ್ನ’ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸವದಿ ತಿರುಗೇಟು

ಬೆಳಗಾವಿ: ರಮೇಶ್ ಜಾರಕಿಹೊಳಿ ಅವರು ‘ಲಕ್ಷ್ಮಣ ಸವದಿ ‌ಅವರು ಬಿಜೆಪಿಗೆ ಸೇರಲು ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ನೀಡಿರುವ ಹೇಳಿಕೆಗೆ ಸ್ವತಃ ಲಕ್ಷ್ಮಣ ಸವದಿ ಅವರೇ ತಿರುಗೇಟು ನೀಡಿದ್ದಾರೆ.

ಸೌದಿ ಅವರು ‘ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿದವರೇ‌ ಜೆಡಿಎಸ್ ಸೇರುವ ಆಲೋಚನೆ ಮಾಡುತ್ತಿದ್ದಾರೆ. ನನ್ನ ಬಗ್ಗೆ ಕೆಲಸ‌ ಇಲ್ಲದವರು ಅಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷ ಬಿಡುವುದಾಗಿ ಯಾವುದೇ ರೀತಿಯ ಹೇಳಿಕೆಗಳನ್ನು ನಾನು ಎಲ್ಲಿಯೂ ನೀಡಿಲ್ಲ. ಅಂತಹ ತಲೆ ಬಡ ಇಲ್ಲದ ಹೇಳಿಕೆಗಳನ್ನು ನೀಡುವವರಿಗೆ ಉತ್ತರಿಸುವ ಅಗತ್ಯ ಸಹ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವ ಆಂತರಿಕ ಗೊಂದಲಗಳು ಸದ್ಯದಲ್ಲೇ ಪರಿಹರಿಯಲಿವೆ ಎಂದು ತಿಳಿಸಿದ್ದಾರೆ.























































 
 
error: Content is protected !!
Scroll to Top