ಪುತ್ತೂರು: ಪರ್ಪುಂಜ ಸೌಗಂಧಿಕ ಆರ್ಟ್ ಗ್ಯಾಲರಿಯಲ್ಲಿ ಏಪ್ರಿಲ್ 8ರಂದು ಸಂಜೆ 4ಕ್ಕೆ ಮುಖಗಳು ಕಲಾಕೃತಿ ಪ್ರದರ್ಶನ ನಡೆಯಲಿದೆ.
ಆದಿತ್ಯ ಸದಾಶಿವ ರಾವ್ ಅವರ ಕಲಾಕೃತಿ ಪ್ರದರ್ಶನ ಇದಾಗಿದೆ. ಕಲಾಪ್ರದರ್ಶನ ಏಪ್ರಿಲ್ 8ರಿಂದ 20ರವರೆಗೆ ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನ ವೀಕ್ಷಣೆಗೆ ಲಭ್ಯವಿದೆ.
ಸುಬ್ರಹ್ಮಣ್ಯ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಎಸ್. ಗೋವಿಂದ ಅವರು ದೀಪ ಬೆಳಗಿಸುವರು. ರಂಗಗೀತೆಗಳ ಕಾರ್ಯಕ್ರಮವನ್ನು ಸತ್ಯ ನಾ ಕೊಡೇರಿ, ರಾಘವೇಂದ್ರ, ಭ್ರಮರ, ಸಂದೇಶ, ಅರವಿಂದ ಕುಡ್ಲ, ರಶ್ಮಿ ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.
























