ಪುತ್ತೂರು: ಬೀರಮಲೆ ಬೆಟ್ಟದಲ್ಲಿರುವ ವಿಶಿಷ್ಟ ಚೇತನರ ಪ್ರಜ್ಞಾ ಆಶ್ರಮದ ಬಾಲಕರಿಗೆ ಪುತ್ತೂರು ಅಗಸ್ತ್ಯ ಶಿವಪೇಟೆಯ ಭಾಸ್ಕರ ಬಾರ್ಯರ ಸೊಸೆ ಕೃಷ್ಣವೇಣಿ ಅವರ ಸೀಮಂತದ ಪ್ರಯುಕ್ತ ಹಣ್ಣುಗಳನ್ನು ವಿತರಿಸಲಾಯಿತು.
ಪ್ರಜ್ಞಾ ಆಶ್ರಮಕ್ಕೆ ಇಂತಹ ಕೊಡುಗೆಗಳನ್ನು ವಿಶೇಷ ಸಂದರ್ಭಗಳಲ್ಲಿ ನೀಡುತ್ತಿರುವ ಭಾಸ್ಕರ ಬಾರ್ಯರಿಗೆ
ಪ್ರಜ್ಞಾ ಆಶ್ರಮದ ವ್ಯವಸ್ಥಾಪಕರಾದ ಅಣ್ಣಪ್ಪ ಮತ್ತು ಜ್ಯೋತಿ ದಂಪತಿ ಕೃತಜ್ಞತೆ ವ್ಯಕ್ತಪಡಿಸಿದರು.
























