ಸವಣೂರು: ವಿದ್ಯಾರಶ್ಮಿ ವಿದ್ಯಾಲಯ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದ ವಿದ್ಯಾರಶ್ಮಿ ವಿದ್ಯಾಲಯದ 26 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಶೇಕಡಾ ಫಲಿತಾಂಶ ಲಭಿಸಿದೆ.
16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಶಿಷ್ಟ ಶ್ರೇಣಿಯ ಸಾಧಕರು: ಅಯಿಷತ್ ಇಹ್ಶಾನ-602 (ಕಲಂಬಿ ಪಲ್ಲತ್ತಾರು ಅಬ್ಬಾಸ್ ಮತ್ತು ರೆಹನತ್ ದೇಂಬಲೆ ಇವರ ಮಗಳು), ಶಝ ಫಾತಿಮ ಪಿ – 600 (ಉಮ್ಮರ್ ಶಾಫಿ ಪಿ. ಮತ್ತು ಫಾತಿಮತ್ ಶಹರ್ ಬಾನ್ ಪಿ. ಇವರ ಮಗಳು), ಫಾತಿಮತ್ ಹನ -597 (ಹಂಝ ಪಿ. ಮತ್ತು ಎಂ. ರಹಿಮತ್ ಬೀಬಿ ಇವರ ಮಗಳು) , ನಿರೀಕ್ಷಾ-560(ತಿಮ್ಮಪ್ಪ ಪೂಜಾರಿ ಮತ್ತು ವಿಜಯಲಕ್ಷಿ ಇವರ ಮಗಳು), ಕೆ. ಮಹಮ್ಮದ್ ಇಶಾಂ -586(ಕೆ ಅಬ್ದುಲ್ ಹಮೀದ್ ಮತ್ತು ಮಸೀದಾ ಎ. ಇವರ ಮಗ), ಅಶೀರ್ ಇಬ್ರಾಹಿಂ -581 (ಹಂಝ ಮತ್ತು ಅಯೀಶಾ ಇವರ ಮಗ), ಸಂಜಯ್ ವೈ. ಎಂ. -581(ಮಂಜುನಾಥ ಮತ್ತು ಸುಮಿತ್ರಾ ಇವರ ಮಗ), ಫಾತಿಮತ್ ಸಫಾನ -578 (ಅಬ್ದುಲ್ ರಝಾಕ್ ಮತ್ತು ಮರಿಯಮ್ಮ ಇವರ ಮಗಳು), ಅಯಿಷ ಅಸ್ಲ -578(ಅಬ್ಬಾಸ್ ಮತ್ತು ಅವ್ವಮ್ಮ ಇವರ ಮಗಳು), ರಿಹಾ ಫಾತಿಮ- 557 (ಆರ್ ಫಾರೂಕ್ ಮತ್ತು ಅಫ್ಸ ಇವರ ಮಗಳು) ಸಜ ಎ. -557 (ಎ. ಶರೀಫ್ ಮತ್ತು ಕೆ. ಎಂ. ಸುನೈಸ ಇವರ ಮಗಳು), ಧೃತಿಕ್ ಎನ್ ಯು-555( ಎನ್ ಉಮೇಶ ಮತ್ತು ತೀರ್ಥಕುಮಾರಿ ಇವರ ಮಗ), ಲಿಖಿತ್ ಕೆ -547(ಸಂಜೀವ ಕೆ. ಮತ್ತು ಗೌರಿ ಕೆ. ಇವರ ಮಗ), ಆಯಿಷತ್ ತಹಶಿಯ- 541(ಕಾಲಿದ್ ಮತ್ತು ಝೀನತ್ ಇವರ ಮಗಳು), ಪ್ರಣಾಮ್ ಶೆಟ್ಟಿ -537(ದಿನೇಶ್ ಶೆಟ್ಟಿ ಮತ್ತು ರತಿಜಾಕ್ಷಿ ಇವರ ಮಗ), ಸುಜನ್-533(ಶಾಂತಾರಾಮ್ ಮತ್ತು ರೇಖಾ ಕೆ ಇವರ ಮಗ) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು, ಬೋಧಕ ವರ್ಗ ಹಾಗೂ ಸಿಬ್ಬಂದಿಗಳನ್ನು ಸಂಚಾಲಕರಾದ ಸವಣೂರು ಸೀತಾರಾಮ ರೈ ಕೆ., ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ತಿಳಿಸಿದ್ದಾರೆ.

























