ಶ್ರೀರಂಗ ತುಲಾಭಾರ ಮತ್ತು ಭಕ್ತಸುಧನ್ವ ತಾಳಮದ್ದಳೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದಲ್ಲಿ ವಿಷು ಸಂಕ್ರಮಣ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಪ್ರೊ. ಪವನ್ ಕಿರಣಕೆರೆ ರಚಿತ ಶ್ರೀ ರಂಗ ತುಲಾಭಾರ ಮತ್ತು ಭಕ್ತ ಸುಧನ್ವ ಜರಗಿತು.

ಭಾಗವತರಾಗಿ ಮಹೇಶ ಕನ್ಯಾಡಿ, ವೆಂಕಟ್ರಮಣ ರಾವ್ ಬನ್ನೆಂಗಳ, ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ರವಿರಾಜ ಜೈನ್ ಕಾರ್ಕಳ ಅರ್ಥಧಾರಿಗಳಾಗಿ ಹರಿದಾಸ ಗಾಂಭೀರ ಧರ್ಮಸ್ಥಳ. (ಶ್ರೀಕೃಷ್ಣ), ದಿವಾಕರ ಆಚಾರ್ಯ ಗೇರುಕಟ್ಟೆ (ಸತ್ಯಭಾಮ), ಸುರೇಶ ಕುದ್ರೆಂತ್ತಾಯ ಉಜಿರೆ (ನಾರದ), ಶ್ರೀನಿವಾಸ್ ರಾವ್ ಧರ್ಮಸ್ಥಳ (ಬಲರಾಮ), ದಿನೇಶ್ ರಾವ್ ಬಳೆಂಜ(ರುಕ್ಮಿಣಿ), ಪೆರ್ಮುದೆ ಜಯಪ್ರಕಾಶ ಶೆಟ್ಟಿ( ಸುಧನ್ವ), ಗಣೇಶ ಶೆಟ್ಟಿ ಕನ್ನಡಿಕಟ್ಟೆ(ಅರ್ಜುನ), ಪ್ರಸಾದ ಸವಣೂರು(ಶ್ರೀಕೃಷ್ಣ) ಭಾಗವಹಿಸಿದ್ದರು.

ಶ್ರೀನಿವಾಸ ರಾವ್ ಸಂಯೋಜನೆಯ ತಾಳಮದ್ದಳೆಯನ್ನು ಪುರಜನ ಸೇವಾ ಸಮಿತಿ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಾಯೋಜಿಸಿದ್ದರು.























































 
 

error: Content is protected !!
Scroll to Top