ಉಗ್ರವಾದದ ಬಗ್ಗೆ ದ್ವಿಮುಖ ನೀತಿ ಕೈ‌ಬಿಡುವಂತೆ ಅಜಿತ್ ದೋವಲ್ ಒತ್ತಾಯ

ನವದೆಹಲಿ: ಉಗ್ರವಾದವನ್ನು ಎದುರಿಸುವ ವಿಚಾರದಲ್ಲಿ ದ್ವಂದ್ವ ನೀತಿಯನ್ನು ಕೈ ಬಿಡಬೇಕು ಎಂದು ಶಾಂಘೈ ಸಹಕಾರ ಸಂಸ್ಥೆಯ ಸದಸ್ಯರನ್ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರು ಒತ್ತಾಯಿಸಿದ್ದಾರೆ.

ಬೀಜಿಂಗ್‌ನಲ್ಲಿ ನಡೆದ ಎಸ್‌ಸಿಒ ಭದ್ರತಾ ಮಂಡಳಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಉಗ್ರವಾದಕ್ಕೆ ಸಂಬಂಧಿಸಿದ ಹಾಗೆ ಅದರ ಅಪರಾಧಿಗಳು ಮತ್ತು ಅವರಿಗೆ ಸಹಕಾರ ನೀಡುವವರನ್ನೇ ಹೊಣೆ ಮಾಡಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈಗಾಗಲೇ ಪಟ್ಟಿ ಮಾಡಿರುವ ಉಗ್ರ ಗುಂಪುಗಳಿಂದ ಬರುವ ನಿರಂತರ ಬೆದರಿಕೆಗಳ ಬಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಉಗ್ರವಾದದ ಬಗ್ಗೆ ಇರುವ  ದ್ವಿಮುಖ ಮಾನದಂಡಗಳನ್ನು ದೂರವಿಡುವ ಅಗತ್ಯತೆಯ ಬಗೆಗೂ ಅವರು ಒತ್ತಿ ಹೇಳಿದ್ದಾರೆ.

ಯಾವುದೇ ಭಯೋತ್ಪಾದಕ ಕೃತ್ಯವಿರಲಿ ಅದು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ. ಗಡಿಯಾಚೆಗಿನ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರು, ಪ್ರಾಯೋಜಕರನ್ನೇ ಇಂತಹ ಕೃತ್ಯಗಳಿಗೆ ಹೊಣೆಮಾಡುವ ಮತ್ತು ಅವರನ್ನು ಕಾನೂನಿನ ಮುಂದೆ ತರುವುದಕ್ಕೆ ಸಹಕಾರ ನೀಡಲು SCO ಸದಸ್ಯರನ್ನು ಅವರು ಒತ್ತಾಯಿಸಿದ್ದಾರೆ.























































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top