ಪುತ್ತೂರು : ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಮತ್ತು ರೋಟರಿ ಕ್ಲಬ್ ಬೀರಮಲೆ ಹಿಲ್ಸ್ ಹಾಗೂ ಲಿಟಲ್ ಫ್ಲವರ್ ಹೈಯರ್ ಪ್ರೈಮರಿ ಸ್ಕೂಲ್ ಜಂಟಿ ಆಶ್ರಯದಲ್ಲಿ 30 ದಿನಗಳ ಕಾಲ ನಡೆಯುವ ಉಚಿತ ಬೇಸಿಗೆ ವಾಲಿಬಾಲ್ ಶಿಬಿರಕ್ಕೆ ಲಿಟ್ಲ್ ಫ್ಲವರ್ ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.
ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ. ದೀಪ ಬೆಳಗಿಸಿ ಚಾಲನೆ ನೀಡಿ, 10 ವರ್ಷದಿಂದ 18 ವರ್ಷದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ವಾಲಿಬಾಲ್ ತರಬೇತಿಯನ್ನ ನೀಡುವ ಸಂಘಟಕರ ಉದ್ದೇಶ ಬಹಳ ಸಂತೋಷ ತಂದಿದೆ ಎಂದರು.
ಇನ್ನೋರ್ವ ಅತಿಥಿ ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಾತನಾಡಿ, ಪುತ್ತೂರಿಗೆ 1984 ರಲ್ಲಿ ವಾಲಿಬಾಲನ್ನು ಪರಿಚಯಿಸಿದ ವ್ಯಕ್ತಿ ಕೋಟೆಕಲ್ ದಿವಂಗತ ಕುನ್ನಿ ಕಣ್ಣನ್ ವೈದ್ಯರು. ಇಂದು ಅವರ ಕುಟುಂಬವು ನಿರಂತರವಾಗಿ ವಾಲಿಬಾಲ್ ಕ್ರೀಡೆಯನ್ನು ಬೆಳೆಸುತ್ತಾ ಬಂದಿದೆ. ಮಕ್ಕಳಿಗೆ ಉತ್ತಮ ತರಬೇತಿದಾರರ ಮೂಲಕ ಉತ್ತಮ ಮಟ್ಟದ ವಾಲಿಬಾಲ್ ತರಬೇತಿ ಇಲ್ಲಿ ಸಿಗುತ್ತಿದೆ ಎಂದರು.
ಚೇಂಬರ್ಸ್ ಆಫ್ ಕಾಮರ್ಸ್ ನ ಅಧ್ಯಕ್ಷ ವಾಮನ್ ಪೈ, ಲಿಟ್ಲ್ ಫ್ಲವರ್ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೇಣೆಶಾ, ಮಿತ್ರ ವೃಂದ ಅಕಾಡೆಮಿ ಸಲಹೆಗಾರಾ ಇಬ್ರಾಹಿಂ ಗೋಳಿಕಟ್ಟೆ ಶುಭ ಹಾರೈಸಿದರು. ರೋಟರಿ ಕ್ಲಬ್ ಬಿರಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಮಿತ್ರ ವೃಂದ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರ ಬೀಚ್ ವಾಲಿಬಾಲ್ ಕೋಚ್ ಎಂ.ಆರ್.ಹಮೀದ್ ಸಾಜ, ಅಕಾಡೆಮಿ ಅಧ್ಯಕ್ಷ ಪಿ.ವಿ. ಕೃಷ್ಣನ್, ಟ್ರಸ್ಟಿ ಪಿವಿ ರಾಘವನ್. ಪಿ.ವಿ. ರಕ್ಷ, ಖಜಾಂಜಿ. ರಾಮಚಂದ್ರ ಮಾಡವ್. ಡಾ.ವಿಕ್ಯಾತ್. ಸ್ಪೋರ್ಟ್ಸ್ ವರ್ಲ್ಡ್ ಮಾಲಿಕ ರಜಾಕ್ ಬಪ್ಪಳಿಗೆ, ಸುದಾನ ಶಾಲೆ ದೈಹಿಕ ಶಿಕ್ಷಕರಾದ ಪುಷ್ಪ ರಾಜ್, ನೇಮಿರಾಜ್ ಕುಂಬ್ರ, ದಯಾಾವತಿ ಸಕಲೇಶಪುರ ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಕಾರ್ಯದರ್ಶಿ ಎಂ .ಆರ್. ಪ್ರಸನ್ನ ಕುಮಾರ್. ವಂದಿಸಿದರು.