ಬಸ್ಸಿನಲ್ಲಿ ಚಿನ್ನದ ಸರವಿದ್ದ ಬ್ಯಾಗ್‍ ಕಳವು | ಪ್ರಕರಣ ದಾಖಲು

ಪುತ್ತೂರು: ಚಿನ್ನದ ಸರ ಖರೀದಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬ್ಯಾಗ್‍ ಕಳವಾದ ಘಟನೆ ನಡೆದಿದೆ.

ಪುತ್ತೂರಿನ ಜಯರಾಮ ಭಟ್‍ ಪಿ. ಎಂಬವರು ಮಂಗಳೂರಿನ ಜ್ಯುವೆಲ್ಲರಿ ಒಂದರಿಂದ 1.60 ಲಕ್ಷ ರೂ. ಮೌಲ್ಯದ ಚಿನ್ನ ಖರೀದಿಸಿ ಬ್ಯಾಗ್‍ನಲ್ಲಿರಿಸಿ ಪುತ್ತೂರಿಗೆ ಕೆ ಎಸ್‍ ಆರ್ ಟಿಸಿ ಬಸ್ ಮೂಲಕ ಬರುತ್ತಿದ್ದಾಗ ಮಂಗಳೂರು ಬಂಟ್ಸ್ ಹಾಸ್ಟೇಲ್ ತಲುಪುತ್ತಿದ್ದಂತೆ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಚಿಲ್ಲರೆ ಹಣ ಬೀಳಿಸಿ ಅವರ ಗಮನ ಬೇರೆಡೆ ಸೆಳೆದಿದ್ದಾಳೆ.

ಆ ಬಳಿಕ ಮಹಿಳೆ ಇನ್ನೋರ್ವ ಮಹಿಳೆಯೊಂದಿಗೆ ಬಸ್ಸಿನಿಂದ ಇಳಿದು ಹೋಗಿದ್ದಾರೆ. ಮನೆಗೆ ಬಂದು ಚಿನ್ನಾಭರಣ ಇದ್ದ  ಬ್ಯಾಗ್ ನೋಡಿದಾಗ ಚಿನ್ನದ ಸರ ಇದ್ದ ಬ್ಯಾಗ್‍ ಕಳವಾಗಿರುವುದು ಕಂಡು ಬಂದಿದೆ. ಈ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top