ಪೆರ್ನಾಜೆ: ಗುಂಪಿನಿಂದ ಬೇರ್ಪಟ್ಟ ಸಲಗದಿಂದ ಕೃಷಿ ಹಾನಿ!!

ಪುತ್ತೂರು: ಪೆರ್ನಾಜೆ ಆಸುಪಾಸಿನಲ್ಲಿ ಒಂಟಿ ಸಲಗದ ಕಾಟ ಕಾಣಿಸಿಕೊಂಡಿದ್ದು, ಕೃಷಿಯನ್ನು ಹಾನಿಗೊಳಿಸಿದೆ. ಘಟನೆಯಿಂದ ಕೃಷಿಕರಲ್ಲಿ ಆತಂಕ ಮನೆಮಾಡಿದೆ.

ಪುತ್ತೂರು – ಸುಳ್ಯ – ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಕೃಷಿ ತೋಟಕ್ಕೆ ಒಂಟಿ ಸಲಗ ಬುಧವಾರ ಮುಂಜಾನೆ ದಾಳಿ ನಡೆಸಿದೆ. ಕುಮಾರ್ ಪೆರ್ನಾಜೆ ಎಂಬವರ ತೋಟಕ್ಕೆ ನುಗ್ಗಿ ಬಾಳೆ ಗಿಡ, ನಾಲ್ಕು ದೀವಿ ಹಲಸು ಮರ, ಅಡಿಕೆ ತೋಟವನ್ನು ಹಾಳುಗೆಡವಿದೆ.

ಗುಂಪಿನಿಂದ ಬೇರ್ಪಟ್ಟ ಸಲಗ: ಗುಂಪಿನಿಂದ ಬೇರ್ಪಟ್ಟ ಒಂಟಿ ಸಲಗ ಇದೆಂದು ಹೇಳಲಾಗುತ್ತಿದೆ. ಈ ಮೊದಲು ಮಂಡೆಕೋಲು, ಮೂರೂರು, ಬೆಳ್ಳಿಪ್ಪಾಡಿ, ಪಂಜಿಕಲ್ಲು ಪರಿಸರದಲ್ಲಿ ಕೃಷಿ ಹಾನಿಗೊಳಿಸಿತ್ತು. ಇದೀಗ ಕನಕಮಜಲಿನಿಂದ ಪೆರ್ನಾಜೆಗೆ ಆಗಮಿಸಿ ದಾಳಿ ಮುಂದುವರಿಸಿದೆ. ಇದರಿಂದ ಕೃಷಿಕರಲ್ಲಿ ಆತಂಕ ಮನೆ ಮಾಡಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top