ಗಾಂಧಿ ಕಟ್ಟೆ ಬಳಿಯ ಹೊಂಡ – ಗುಂಡಿ ರಸ್ತೆಯ ದುಸ್ಥಿತಿ | ತೇಪೆ ಹಾಕಿದ ಎರಡೇ ದಿನದಲ್ಲಿ ಮತ್ತೆ ಹೊಂಡ – ಗುಂಡಿ ಪ್ರತ್ಯಕ್ಷ | ರಸ್ತೆ ದುಸ್ಥಿತಿಗೆ ಯಾರನ್ನು ಹಳಿಯಲಿ ಎನ್ನುವಂತಿದೆ ಗಾಂಧಿ ತಾತನ ಮೌನ!!

ಪುತ್ತೂರು: ಅದೇಗೊ ಬಹಳ ಪ್ರಯಾಸಪಟ್ಟು ಐತಿಹಾಸಿಕ ಪ್ರಾಧಾನ್ಯತೆಯ ಗಾಂಧಿ ಕಟ್ಟೆ ಉತ್ತಮವಾಗಿ ಮೂಡಿಬಂತು. ಆದರೆ ಗಾಂಧಿಕಟ್ಟೆಯ ಬಳಿಯಲ್ಲೇ ಇರುವ ರಸ್ತೆ ಜಪ್ಪಯ್ಯ ಅಂದರೂ ಸರಿಯಾಗಲು ಕೇಳುತ್ತಿಲ್ಲ.

ಇದು ಒಂದೆರಡು ದಿನದ ಕಥೆಯಲ್ಲ. ಕಳೆದ ಹಲವು ದಿನಗಳಿಂದ ವಾಹನ ಸವಾರರು, ಇದೇ ಹೊಂಡ – ಗುಂಡಿಯ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ಸಾಗುತ್ತಿದ್ದಾರೆ. ಆದರೂ ಯಾರೊಬ್ಬರೂ ಈ ರಸ್ತೆ ದುಸ್ಥಿತಿಯ ಬಗ್ಗೆ ಚಕಾರ ಎತ್ತುವಂತೆ ಕಾಣಿಸುತ್ತಿಲ್ಲ.

ಪುತ್ತೂರು ಪೇಟೆಯ ಸಂಚಾರ ದಟ್ಟಣೆಗೆ ಇದು ಒಂದು ಕಾರಣ. ವಾಹನಗಳು ಹೊಂಡ ಗುಂಡಿಯನ್ನು ತಪ್ಪಿಸಲು ಸರ್ಕಸ್ ಮಾಡುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಇಲ್ಲಿ ದಿನವಿಡೀ ವಾಹನ ದಟ್ಟಣೆಯ ತೊಡಕು.





























 
 

ಒಟ್ಟಿನಲ್ಲಿ ಈ ದುಸ್ಥಿತಿಗೆ ಯಾರನ್ನು ಹಳಿಯಬೇಕು ಎಂದು ಗಾಂಧಿ ತಾತ ಯೋಚನಾಮಗ್ನರಾದಂತಿದೆ! ರಸ್ತೆ ಹಾಳಾದದ್ದು ಒಂದೆಡೆಯಾದರೆ, ಈ ರಸ್ತೆಗೆ ತೇಪೆ ಹಾಕಿದ ಕಾರ್ಯ ಇನ್ನೊಂದು ರಾದ್ಧಾಂತಕ್ಕೆ ಕಾರಣವಾಗಿದೆ.

ಹೊಂಡ ಮುಚ್ಚಲು ಹಾಕಿದ ತೇಪೆ, ಒಂದೆರಡು ದಿನದಲ್ಲಿ ಎದ್ದು ಹೋಗಿದೆ. ಮತ್ತದೇ ದುಸ್ಥಿತಿ ವಾಹನ ಸವಾರರಿಗೆ. ಮಾತ್ರವಲ್ಲ, ಈ ತೇಪೆ ಕಾರ್ಯ, ಈ ಕಡೆ ಅರುಣಾ ಥಿಯೇಟರ್’ವರೆಗೆ – ಇನ್ನೊಂದು ಬದಿ ಚರ್ಚ್ ಮುಂಭಾಗದವರೆಗೆ ವಾಹನಗಳ ಜೊತೆಗೆ ಸಾಗಿದೆ. ಇಡೀಯ ರಸ್ತೆ ಕೆಸರಿನಿಂದ ಕೂಡಿದ್ದು, ಸವಾರರು ಪರದಾಡುವಂತಾಯಿತು. ಮಳೆಯಿಂದಾಗಿ ಕೆಸರು ಸ್ವಲ್ಪ ಕಡಿಮೆಯಾದದ್ದರ ಜೊತೆಗೆ, ಹೊಂಡದ ತೇಪೆಯನ್ನು ಎದ್ದು ಹೋಗುವಂತೆ ಮಾಡಿದೆ. ಭ್ರಷ್ಟಾಚಾರವನ್ನು ವಿರೋಧಿಸಿದ್ದ ಗಾಂಧಿ ತಾತ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top