ಲಿಫ್ಟ್‌ ನಡುವೆ ಸಿಲುಕಿ ಯುವಕ ದಾರುಣ ಸಾವು

ಕೆಟ್ಟು ನಿಂತ ಲಿಫ್ಟ್‌ ಹಠಾತ್‌ ಚಲಿಸಿ ಸಂಭವಿಸಿದ ದುರಂತ

ಮಂಗಳೂರು : ನಗರದ ಕುಂಟಿಕಾನದ ಮಾರ್ಟ್‌ವೊಂದರಲ್ಲಿ ಶನಿವಾರ ಸಂಜೆ ಸಂಭವಿಸಿದ ಲಿಫ್ಟ್ ಅವಘಡದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾರೆ. ಬೆಳಾಲು ಗ್ರಾಮದ ಪೂಂಜಕೆರೆ ನಿವಾಸಿ ನೌಫಾಲ್ (28) ಮೃತಪಟ್ಟ ಯುವಕ.

ಶನಿವಾರ ಸಂಜೆ ನೌಫಾಲ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಲಿಫ್ಟ್‌ನಲ್ಲಿ ಅವಘಡ ಸಂಭವಿಸಿದೆ. ತಕ್ಷಣ ಇತರರು ಈತನನ್ನು ಅಪಾಯದಿಂದ ಪಾರು ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಮೃತ ನೌಫಾಲ್ ಅವಿವಾಹಿತ ಎಂದು ತಿಳಿದುಬಂದಿದೆ.





















































 
 

ನೌಫಾಲ್‌ ಕಾರ್ಯನಿಮಿತ್ತ ಲಿಫ್ಟ್‌ನಲ್ಲಿ ಮೇಲಕ್ಕೆ ಹೋಗುತ್ತಿರುವಾಗ ನೆಲಮಹಡಿ ಮತ್ತು ಟನೇ ಮಹಡಿ ಮಧ್ಯೆ ಲಿಫ್ಟ್‌ ಕೆಟ್ಟುನಿಂತಿದೆ. ಕೂಡಲ ಸಹೋದ್ಯೋಗಿಗಳು ಅವರ ರಕ್ಷಣೆಗೆ ಧಾವಿಸಿದ್ದಾರೆ. ಲಿಫ್ಟ್‌ನ ಬಾಗಿಲುನ್ನು ಬಲವಂತವಾಗಿ ತೆರೆದು ಅವರನ್ನು ರಕ್ಷಿಸಲು ನೌಫಾಲ್‌ ಅವರ ಕೈ ಹಿಡಿದುಕೊಂಡು ಮೇಲಕ್ಕೆ ಎತ್ತುತ್ತಿರುವಾಗಲೇ ಲಿಫ್ಟ್‌ ಹಠಾತ್‌ ಚಲಿಸಿದೆ. ಗಂಭೀರ ಗಾಯಗೊಂಡ ನೌಫಾಲ್‌ ಆಸ್ಪತ್ರೆಗೆ ತಲುಪುವ ಮೊದಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top