ಮಂಗಳೂರು: ಮಂಗಳೂರಿನ ‘ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ’ದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಿರಣ್ ಬುಡ್ಲೆಗುತ್ತು ನೇತೃತ್ವದ ‘ಸಮಗ್ರ ಅಭಿವೃದ್ಧಿ ಸಂಘಟನಾ ಬಳಗ’ ಸ್ಪಷ್ಟ ಬಹುಮತದೊಂದಿಗೆ ಜಯ ಗಳಿಸಿದೆ.
ಸುಮಾರು 2083 ಮತದಾರರನ್ನು ಹೊಂದಿದ್ದ ಈ ಚುನಾವಣೆಯಲ್ಲಿ ಲೋಕಯ್ಯ ಗೌಡ ಬಳಗ ಮತ್ತು ಕಿರಣ್ ಬುಡ್ಲೆಗುತ್ತು ಬಳಗದ ನಡುವೆ ತೀವ್ರ ಪೈಪೋಟಿ ಇತ್ತು. ಒಟ್ಟು 21 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಿರಣ್ ಬುಡ್ಲೆಗುತ್ತು ನೇತೃತ್ವದ ತಂಡ 16 ಸ್ಥಾನಗಳನ್ನು ಮುಡಿಗೇರಿಸಿಕೊಂಡು ಅಭೂತಪೂರ್ವ ಜಯ ಸಾಧಿಸಿದರೆ, ಲೋಕಯ್ಯ ಗೌಡ ನೇತೃತ್ವದ ತಂಡ 5 ಸ್ಥಾನಗಳನ್ನು ಗೆದ್ದುಕೊಂಡಿದೆ.
ಈ ಚುನಾವಣೆ ಎಪ್ರಿಲ್ 8 ರಂದು ಮಂಗಳೂರಿನ ಬಲ್ಲಾಳ್ ಬಾಗ್ನಲ್ಲಿರುವ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಅಸೋಸಿಯೇಷನ್ನಲ್ಲಿ ನಡೆದಿತ್ತು. ಒಟ್ಟು 21 ಸ್ಥಾನಗಳಲ್ಲಿ 12 ಸಾಮಾನ್ಯ ಸ್ಥಾನ, 4 ಮಹಿಳಾ ಮೀಸಲು ಮತ್ತು 5 ಯುವ ಮೀಸಲು ಸ್ಥಾನಗಳಿದ್ದವು.
ನೂತನ ನಿರ್ದೇಶಕರುಗಳು:
ಆನಂದ ಪಿ.ಎಚ್., ಕಲಾವತಿ, ಕಿರಣ್ ಬುಡ್ಲೆಗುತ್ತು, ಕೃಷ್ಣಪ್ಪ ಗೌಡ ಪಡಂಬೈಲು, ಗುರುದೇವ ಯು.ಬಿ., ಚಂದ್ರಶೇಖರ ಆರಿಗ, ಜಯರಾಮ ಗೌಡ ಗುಡ್ಡೆಮನೆ, ಜಯಶ್ರೀ ಪರ್ಲ, ನವೀನ್ ಚಂದ್ರ ಭೋಜಾರ, ಪದ್ಮನಾಭ ಅತ್ರ್ಯಾಡಿ, ಪುರುಷೋತ್ತಮ ಕರಂಗಲ್ಲು, ರಾಮಚಂದ್ರ ಕೆ., ಕಿರಣ್ ಕೆ., ನಾಗೇಶ್ ಗೌಡ ಕೆ., ಪ್ರಜ್ಞಾ, ಕಾಪಿನಡ್ಕ, ಮಂಜುಪ್ರಸಾದ್ ಕುರುಂಜಿ, ರಕ್ಷಿತ್ ಪುತ್ತಿಲ, ಅನಿತಾ ಎಸ್., ಪೂರ್ಣಿಮಾ ಕೆ.ಎಂ., ಸಾರಿಕಾ ಸುರೇಶ್ ಕುಮಾರ್
ಸೌಮ್ಯ ಸುರೇಶ್ ಆಯ್ಕೆಯಾಗಿದ್ದಾರೆ.
ವಿಶೇಷ ಸೂಚನೆ: ಆಯ್ಕೆಯಾದ ನಿರ್ದೇಶಕರ ಪೈಕಿ ಕಲಾವತಿ, ಜಯರಾಮ ಗೌಡ ಗುಡ್ಡೆಮನೆ, ಪದ್ಮನಾಭ ಅತ್ರ್ಯಾಡಿ, ಪೂರ್ಣಿಮಾ ಕೆ.ಎಂ. ಮತ್ತು ಕಿರಣ್ ಕೆ. ಅವರು ಲೋಕಯ್ಯ ಗೌಡರ ತಂಡದಿಂದ ಸ್ಪರ್ಧಿಸಿದ್ದರು. ಇದಲ್ಲದೆ, ಆಯ್ಕೆಯಾಗಿರುವ ಮಂಜುಪ್ರಸಾದ್ ಕುರುಂಜಿ ಅವರಿಗೆ ಎರಡೂ ತಂಡದವರು ಬೆಂಬಲ ಘೋಷಿಸಿ, ತಮ್ಮ ತಮ್ಮ ಕರಪತ್ರಗಳಲ್ಲಿ ಅವರ ಹೆಸರನ್ನು ಪ್ರಕಟಿಸಿದ್ದರು ಎಂಬುದು ವಿಶೇಷ.

























