ಹುಬ್ಬಳ್ಳಿ: ಬೈಕ್ನಲ್ಲಿ ಹೋಗುತ್ತಿದ್ದಾಗ ಗಾಳಿ ಮಳೆಗೆ ಕೇಬಲ್ ಒಂದು ತುಂಡಾಗಿ ಮೈಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಚ ಘಟನೆ ನಗರದ ಗೋಕುಲ ರಸ್ತೆಯ ಅರ್ಬನ್ ಓಯಸಿಸ್ ಮಾಲ್ನ ಸಮೀಪ ನಡೆದಿದೆ.
ಮೃತರನ್ನು ತಾಜ್ ನಗರ ನಿವಾಸಿ ಮೀಜಾಮುಲ್ಲಾ ಮುಲ್ಲಾ ಮತ್ತು ಫಯಾಜ್ ಭಾಗವಾನ ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಬೈಕ್ ಮೂಲಕ ಗೋಕುಲ್ ರಸ್ತೆ ವಿಮಾನ ನಿಲ್ದಾಣದಿಂದ ಹೊಸೂರು ಕಡೆ ಬರುತ್ತಿದ್ದರು. ಈ ವೇಳೆ ಗಾಳಿ ಮಳೆಗೆ ಕೇಬಲ್ ತುಂಡಾಗಿ ಇವರ ಮೇಲೆ ಬಿದ್ದಿದೆ. ಅದನ್ನು ತಪ್ಪಿಸುವ ಪ್ರಯತ್ನದಲ್ಲಿದ್ದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

























