ನವದೆಹಲಿ: ಇಸ್ರೇಲ್ – ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧ ನಿಲ್ಲಿಸುವ ತಾಕತ್ತು ಭಾರತಕ್ಕೆ ಇದೆ. ಈ ಯುದ್ಧದಿಂದ ಇಡೀ ಜಗತ್ತು ಸಮಸ್ಯೆ ಎದುರಿಸುತ್ತಿದೆ. ಭಾರತ ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲಿಸಲಿ ಎಂದು ಫಿನ್ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಂತಿ ಸಭೆ ನಡೆಸುವ ಮೂಲಕ ಯುದ್ಧ ನಿರತ ರಾಷ್ಟ್ರಗಳ ಬಿಕ್ಕಟ್ಟು ಶಮನಕ್ಕೆ ಭಾರತ ಪ್ರಯತ್ನ ಮಾಡಬೇಕು. ವಿಶ್ವಕ್ಕೆ ಈಗ ಯುದ್ಧ ವಿರಾಮದ ಅಗತ್ಯತೆ ಇದೆ. ಭಾರತ ಈ ಕಾರ್ಯಕ್ಕೆ ಭಾಗಿಯಾಗಬಹುದೇ ಎನ್ನುವ ಕುತೂಹಲವೂ ಇದೆ. ಭಾರತದ ಸಚಿವ ಜೈ ಶಂಕರ್ ಅವರು ಬಿಕ್ಕಟ್ಟು ಶಮನಕ್ಕೆ ಯುದ್ಧ ವಿರಾಮಕ್ಕಾಗಿ ಕರೆ ಕೊಟ್ಟಿದ್ದನ್ನು ನಾವು ನೋಡಿದ್ದೇವೆ ಎಂದು ತಿಳಿಸಿದ್ದಾರೆ.
ವಿಶ್ವದ ಹೆಚ್ಚಿನ ರಾಷ್ಟ್ರಗಳ ಜೊತೆಗೆ ಭಾರತ ಉತ್ತಮ ಬಾಂಧವ್ಯ ಇರಿಸಿಕೊಂಡಿದೆ. ಯುದ್ಧ ನಿರತ ದೇಶಗಳೊಂದಿಗೂ ಭಾರತದ ಸಂಬಂಧ ಚೆನ್ನಾಗಿದೆ. ಹಾಗೆಯೇ ಭಾರತದಲ್ಲಿ ಯಾರ ಜೊತೆಗೆ ಬೇಕಾದರೂ ಮಾತುಕತೆ ನಡೆಸುವ ಶಕ್ತಿ ಇದೆ ಎಂದು ಅವರು ಹೇಳಿದ್ದಾರೆ.



























