ಅರಣ್ಯಾಧಿಕಾರಿ ಮನೆಗೆ ನುಗ್ಗಿ ನಗ-ನಗದು ದೋಚಿದ ಕಳ್ಳರು

ಉಳ್ಳಾಲ: ಅರಣ್ಯಾಧಿಕಾರಿಯ ಬಾಡಿಗೆ ಮನೆಯಿಂದ ಕಳ್ಳರು ನಗ, ನಗದು ದೋಚಿದ ಘಟನೆ ಅಂಬಿಕಾರೋಡ್‌ನ ಕಾಪಿಕಾಡು ಎಂಬಲ್ಲಿ ನಡೆದಿದೆ.

ಕೋಟೆಕಾರು ಉಪ ವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಕಳ್ಳರು ಹತ್ತೂವರೆ ಲಕ್ಷ ರೂ ಹಣ, 181 ಗ್ರಾಂ ಚಿನ್ನ, ಬೆಳ್ಳಿಯನ್ನು ‌ಮತ್ತು ಒಂದು ಬೈಕ್ ಅನ್ನು ಹೊತ್ತೊಯ್ದಿದ್ದಾರೆ. ಅವರು ತಮ್ಮ ಹುಟ್ಟೂರು ಕೊಪ್ಪಳಕ್ಕೆ ತೆರಳಿದ್ದ ‌ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮೆಹಬೂಬ್ ಸಾಬ್ ಇಂದು ತಮ್ಮ ಬಾಡಿಗೆ ಮನೆಗೆ ವಾಪಾಸ್ಸಾದ ಸಮಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರ ಪಾಲಾಗಿರುವ ಹತ್ತುೂವರೆ ಲಕ್ಷ ರೂ. ಗಳನ್ನು ಅವರು ಬ್ಯಾಂಕಿನಿಂದ ಸಾಲ ಪಡೆದಿದ್ದರು ಎಂದು ತಿಳಿದು ಬಂದಿದೆ.





















































 
 

ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಳ್ಳತನ ಯಾವಾಗ ನಡೆದಿದೆ ಎನ್ನುವುದರ ಸುಳಿವು ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿದ್ದರೂ ಸಿಕ್ಕಿಲ್ಲ. ಹತ್ತಿರದಲ್ಲಿ ಎಲ್ಲೂ ಸಿಸಿಟಿವಿ ಇಲ್ಲದೇ ಇದ್ದು ಕಳ್ಳತನ ಪ್ರಕರಣ ಬೇಧಿಸುವುದು ಸವಾಲಾಗಿ ಪರಿಣಮಿಸಿದೆ.

error: Content is protected !!
Scroll to Top