ಪುತ್ತೂರು: ಭೂಮಿಯಿಂದ ಕೆಲವೇ ಮಟ್ಟಗಳ ದೂರದಲ್ಲಿ ಜೆಟ್ ವಿಮಾನವೊಂದು ಹಾರಾಟ ನಡೆಸಿದ್ದು, ಪುತ್ತೂರಿಗರಲ್ಲಿ ಕೆಲಕಾಲ ಆಂತಕ ಸೃಷ್ಟಿಸಿದ ಘಟನೆ ನಡೆಯಿತು.
ಮಂಗಳವಾರ ಮಧ್ಯಾಹ್ನ ಮಹಾಲಿಂಗೇಶ್ವರ ದೇಗುಲದ ಸಮೀಪದಲ್ಲಿ ಜೆಟ್ ವಿಮಾನ ಹಾರಾಟ ನಡೆಸಿದ್ದು, ಏನಿದು? ಯಾತಕ್ಕಾಗಿ ವಿಮಾನ ಹಾರಾಟ ನಡೆಸುತ್ತಿದೆ ಎಂಬ ಗೊಂದಲ ಕೆಲಕಾಲ ಸೃಷ್ಟಿಯಾಯಿತು.
ಆ ಬಳಿಕ ಇದು ಭೂಮಿಯ ರಚನೆ, ಅಧ್ಯಯನಕ್ಕೆ ನಡೆದ ಜೆಟ್ ವಿಮಾನ ಸರ್ವೇ ಕಾರ್ಯ. ಭೂ ವಿಜ್ಞಾನಕ್ಕೆ ನಡೆದ ವೈಮಾನಿಕ ಸರ್ವೇ ಎಂದು ತಿಳಿದ ಬಳಿಕ ಜನರು ನಿರಾಳರಾದರು ಎಂದು ತಿಳಿದು ಬಂದಿದೆ.
























