ಶ್ರೀ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟಿನ ವತಿಯಿಂದ ದಿನಾಂಕ 24 .2.2026 ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನದ ಪ್ರಯುಕ್ತ
ಶ್ರೀ ಮಹಾಭಾರತ ಸರಣಿಯ 108ನೇ ( *ಅಷ್ಟೋತ್ತರ ಶತ) ಕಾರ್ಯಕ್ರಮವಾಗಿ ಶ್ರೀ ಬಲಿಪ ನಾರಾಯಣ ಭಾಗವತ ವಿರಚಿತ ಶ್ರೀ ಕೃಷ್ಣ ಗಾರುಡಿ ತಾಳಮದ್ದಳೆ ಜರಗಿತು.
ಅರ್ಥಧಾರಿ ಗಳಾಗಿ : ಅಂಬಾ ಪ್ರಸಾದ್ ಪಾತಾಳ (ಧರ್ಮರಾಯ 1), ದಿವಾಕರ ಆಚಾರ್ಯ ಗೇರುಕಟ್ಟೆ (ಧರ್ಮರಾಯ 2)ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, (ನಾರದ)ಗುಡ್ಡಪ್ಪ ಬಲ್ಯ(ಅರ್ಜುನ 2), ಶ್ರೀಧರ್ ಎಸ್ಪಿ ಸುರತ್ಕಲ್(ಭೀಮ ),ಗೀತಾ ಕುದ್ದಣ್ಣಾಯ (ಅರ್ಜುನ1) ,ಸಂಜೀವ ಪಾರೆಂಕಿ (ಶ್ರೀ ಕೃಷ್ಣ),ಜಿನೇಂದ್ರ ಜೈನ್ ಬಳ್ಳಮಂಜ(ಮಾಯಾಮೋಹಿನಿ) ,ಜಯರಾಮ ನಾಲ್ಗುತ್ತು (ಗಾರುಡಿಗ) ಭಾಗವಹಿಸಿದ್ದರು.
ಭಾಗವತರಾಗಿ ಪದ್ಮನಾಭ ಕುಲಾಲ್ ಸುರೇಶ ರಾವ್. ಬಿ ,ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ ಗುರುಮೂರ್ತಿಅಮ್ಮಣ್ಣಾಯ,ಪ್ರಚೇತ್ ಆಳ್ವ ಬಾರ್ಯ ಸಹಕರಿಸಿದರು.
ಕಾಳಿಕಾಂಬಾ ಯಕ್ಷಕಲಾ ಟ್ರಸ್ತಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಶ್ರೀಧರ ಎಸ್ಪಿ ಸುರತ್ಕಲ್ ವಂದಿಸಿದರು.
























