ಮುರುಡೇಶ್ವರ: ಅಶಾಂತಿದೂತ ಯುವಕರು ಹಿಂದೂ ಧರ್ಮೀಯರ ಮನೆಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿರುವ ಘಟನೆ ಬೈಲೂರಿನ ತೆಂಗಾರಿನಲ್ಲಿ ನಡೆದಿದೆ.
ರಾತ್ರಿ ವೇಳೆ ಮೂರು ಬೈಕ್ಗಳ ಮೂಲಕ ಬಂದ ದುಷ್ಕರ್ಮಿಗಳು ಹಿಂದೂ ಧರ್ಮೀಯರ ಮನೆಗಳ ಮೇಲೆ ಕಲ್ಲೆಸೆದಿದ್ದಾರೆ. ಅಪ್ರಾಪ್ತ ವಯಸ್ಸಿನ ಅಶಾಂತಿದೂತರು ಗುಂಪಾಗಿ ಬಂದು ನಡೆಸಿದ ಕೃತ್ಯ ಇದೆಂದು ತಿಳಿದು ಬಂದಿದೆ.
ಮೂವರು ಆರೋಪಿಗಳನ್ನು ಸ್ಥಳೀಯ ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ಬಳಿಕ ಹಿಂದೂಗಳು ಮುರ್ಡೇಶ್ವರ ಠಾಣೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಆ ಬಳಿಕ ಪೊಲೀಸರು ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
























