ಮಂಗಳೂರು: ಹಸುವೊಂದು ಹೊಟೇಲ್ಗೆ ನುಗ್ಗಿ ಅಲ್ಲಿದ್ದ ಆಹಾರಗಳನ್ನು ತಿಂದಿದ್ದು, ಆ ಹಸುವನ್ನು ಹೆದರಿಸಲು ಹೊಟೇಲ್ ಮಾಲೀಕ ಚಾಕು ಹಿಡಿದು ಹಸುವನ್ನು ಹೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿರುವ ಘಟನೆ ನಡೆದಿದೆ.
ಈ ಘಟನೆಯಲ್ಲಿ ಹಸುವಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಯಾರಿಂದಲೂ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ. ಆದರೆ ಪೊಲೀಸರೇ ಈ ವಿಚಾರದಲ್ಲಿ ಹಸುವಿಗೆ ಹಲ್ಲೆ ನಡೆಸಿದ ಹೊಟೇಲ್ ಮಾಲೀಕ ಮತ್ತು ಹಸುವಿನ ವಾರೀಸುದಾರರ ಮೇಲೆ ಕೇಸು ದಾಖಲು ಮಾಡಿರುವುದಾಗಿದೆ.
ಹಸುವಿಗೆ ಗಾಯಗಳಾಗಿರುವ ಹಿನ್ನೆಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯನ್ವಯ ಹೊಟೇಲ್ ಮಾಲೀಕನ ವಿರುದ್ಧ ಮತ್ತು ಹಸುವಿಗೆ ಸರಿಯಾಗಿ ಆಹಾರ ನೀಡದೆ ರಸ್ತೆಗೆ ಬಿಟ್ಟ ಆರೋಪದಲ್ಲಿ ಹಸುವಿನ ಮಾಲೀಕರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು
























