ಸುಬ್ರಹ್ಮಣ್ಯ: ಸುಳ್ಯದ ಕುರುಂಜಿಯ ಕುಡಿ, ಧಾರ್ಮಿಕ ಶ್ರದ್ಧಾಳು ಆಗಿರುವ ಡಾಕ್ಟರ್ ಕೆ.ವಿ. ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದರು ಸುಬ್ರಹ್ಮಣ್ಯಾಧೀಶ ಸುಬ್ಬಪ್ಪನಿಗೆ ಹರಕೆ ಸೇವೆಯಾಗಿ ಸಲ್ಲಿಸಿರುವ ಬೆಳ್ಳಿರಥಕ್ಕೆ ಅವರಿಂದಲೇ ಪ್ರಥಮ ಬೆಳ್ಳಿರಥ ಸೇವೆ ನಿನ್ನೆ ರಾತ್ರಿ ನಡೆಯಿತು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉಪಸ್ಥಿತರಿದ್ದು ರಥಸೇವೆಯಲ್ಲಿ ಪಾಲ್ಗೊಂಡರು.
ರೇಣುಕಾಪ್ರಸಾದ್ – ಜ್ಯೋತಿ ಆರ್. ಪ್ರಸಾದ್ ಮತ್ತು ಮನೆಯವರು ರಥ ಎಳೆಯಲು ಕೈ ಜೋಡಿಸಿದ್ದು ವಿಶೇಷವಾಗಿತ್ತು.
























