ಕರಾವಳಿಯಲ್ಲಿ ಕಾರುಗಳ ಮಾರಾಟ ಶೇ. 30 ಹೆಚ್ಚಳ

ಜಿಎಸ್‌ಟಿ ಇಳಿಕೆ; ಹಬ್ಬದ ಕೊಡುಗೆಗಳ ಪರಿಣಾಮ ಗರಿಗೆದರಿದ ವ್ಯಾಪಾರ ವಹಿವಾಟು

ಮಂಗಳೂರು : ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಕೆ ಮಾಡಿದ ಪರಿಣಾಮವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲೂ ವ್ಯಾಪಾ ವಹಿವಾಟುಗಳು ವೃದ್ಧಿ ಕಂಡಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರುಗಳ ಮಾರಾಟ ಶೇ.30ರಷ್ಟು ಏರಿಕೆ ಕಂಡಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಬ್ಬದ ಸೀಸನ್‌ನಲ್ಲಿ ವಾಹನಗಳ ಖರೀದಿ ಗಣನೀಯವಾಗಿ ಹೆಚ್ಚಾಗಿದೆ. ಅನೇಕರು ದೀಪಾವಳಿಯನ್ನು ಹೊಸ ವಾಹನಗಳೊಂದಿಗೆ ಸಂಭ್ರಮಿಸಿದ್ದಾರೆ. ದಸರಾದಿಂದಲೇ ವಾಹನ ಮಾರಾಟ ಸ್ಥಿರವಾಗಿ ಏರಿಕೆ ಕಂಡಿದ್ದು, ದೀಪಾವಳಿಯ ಸಂದರ್ಭದಲ್ಲಿ ಇದು ಗರಿಷ್ಠ ಮಟ್ಟವನ್ನು ತಲುಪಿದೆ. ಜಿಎಸ್‌ಟಿ ದರ ಇಳಿಕೆ ಮತ್ತು ಆಕರ್ಷಕ ಹಬ್ಬದ ಕೊಡುಗೆಗಳು ಗ್ರಾಹಕರನ್ನು ಆಕರ್ಷಿಸಿವೆ. ಹೊಸ ವರ್ಷಾಚರಣೆವರೆಗೂ ವಾಹನ ಖರೀದಿ ಮುಂದುವರಿಯುವ ನಿರೀಕ್ಷೆಯನ್ನು ವಾಹನ ಮಾರುಕಟ್ಟೆ ಹೊಂದಿದೆ.





















































 
 

ಮಂಗಳೂರು, ಉಡುಪಿ, ಪುತ್ತೂರು ಮತ್ತು ಬಂಟ್ವಾಳ ಪ್ರದೇಶಗಳಲ್ಲಿ ಖರೀದಿಸಿದ ಬಹುತೇಕ ವಾಹನಗಳು ಈಗಾಗಲೇ ನೋಂದಣಿಯಾಗಿವೆ, ಆದರೆ ಇನ್ನೂ ಕೆಲವು ನೋಂದಣಿ ಪ್ರಕ್ರಿಯೆಯಲ್ಲಿವೆ. ವಿವಿಧ ಡೀಲರ್‌ಶಿಪ್‌ಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಈ ಆರ್ಥಿಕ ವರ್ಷದಲ್ಲಿ ವಾಹನ ಮಾರಾಟವು ಶೇ. 20 ರಿಂದ 30 ರಷ್ಟು ಹೆಚ್ಚಾಗಿದೆ. ಕೆಲವು ಬ್ರ‍್ಯಾಂಡ್‌ಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.80ರಷ್ಟು ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿವೆ. ಹೊಸದಾಗಿ ಖರೀದಿಸಿದ ವಾಹನಗಳಲ್ಲಿ ದ್ವಿಚಕ್ರ ವಾಹನಗಳೇ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿವೆ.

ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಒಟ್ಟು 38,969 ವಾಹನಗಳು ನೋಂದಣಿಯಾಗಿದ್ದು, ಅಕ್ಟೋಬರ್ ತಿಂಗಳೊಂದರಲ್ಲೇ 4,117 ವಾಹನಗಳು ನೋಂದಣಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 26,568 ನೋಂದಣಿಗಳಾಗಿದ್ದು, ಅಕ್ಟೋಬರ್‌ನಲ್ಲಿ 4,506 ನೋಂದಣಿಗಳಾಗಿವೆ. ಪುತ್ತೂರು ಆರ್‌ಟಿಒ ವ್ಯಾಪ್ತಿಯಲ್ಲಿ ಈವರೆಗೆ 9,696 ವಾಹನಗಳು ನೋಂದಣಿಯಾಗಿದ್ದು, ಅಕ್ಟೋಬರ್‌ನಲ್ಲಿ 1,081 ನೋಂದಣಿಯಾಗಿವೆ. ಇದೇ ವೇಳೆ, ಬಂಟ್ವಾಳ ಆರ್‌ಟಿಒನಲ್ಲಿ ಒಟ್ಟು 5,950 ವಾಹನಗಳ ನೋಂದಣಿಯಾಗಿದ್ದು, ಅಕ್ಟೋಬರ್‌ನಲ್ಲಿ 681 ನೋಂದಣಿಯಾಗಿವೆ.

error: Content is protected !!
Scroll to Top