ಪುತ್ತೂರು: ‘ಜ್ಞಾನ ಚಕ್ಷು’ ಸ್ಮರಣಶಕ್ತಿ ಶಿಬಿರದ ಯಶಸ್ವಿ ಸಮಾರೋಪ – ಮಕ್ಕಳ ಪ್ರತಿಭೆಗೆ ಮೆಚ್ಚುಗೆ


ಪುತ್ತೂರು: ಕೇಪುಳು ಶಿರಡಿ ಸಾಯಿ ಮಂದಿರದ ಆವರಣದಲ್ಲಿ ಅಕ್ಟೋಬರ್ 21 ರಂದು ಪ್ರಾರಂಭವಾಗಿದ್ದ, ಮಕ್ಕಳಿಗೆ 10 ದಿನಗಳ ಕಾಲ ಸ್ಮರಣಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸುವ ‘ಜ್ಞಾನ ಚಕ್ಷು’ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಭಾನುವಾರ, ನವೆಂಬರ್ 02, 2025 ರಂದು ಯಶಸ್ವಿಯಾಗಿ ನೆರವೇರಿತು.

ಬೆಳಿಗ್ಗೆ 9:30ಕ್ಕೆ ಪೂಜೆ, ಭಜನೆ ಮತ್ತು ಪೋಷಕರಿಗೆ ವಿಶೇಷ ಉಪನ್ಯಾಸದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬೆಳಿಗ್ಗೆ 11:30ಕ್ಕೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಸಮಾರಂಭಕ್ಕೆ ಡಾ. ಉದಯಕೃಷ್ಣ ಬಿ, ಪ್ರೊ. ಸೀತಾರಾಮ ಕೇವಳ, ಶ್ರೀ ನಾರಾಯಣ ರೈ, ಶ್ರೀ ಬಾಲಕೃಷ್ಣ ನಾಯಕ್, ಶ್ರೀ ನಂದಕಿಶೋರ್, ಶ್ರೀ ರಮೇಶ್ ಕೋಡಂದೂರು, ಶ್ರೀ ಪದ್ಮನಾಭ ಸುಳ್ಯ, ಶ್ರೀ ರಾಜೇಶ್ ಕೆ, ಶ್ರೀ ಕೃಷ್ಣ ಪ್ರಸಾದ್, ಡಾ. ಆಶಾ, ಮತ್ತು ಅವಿನಾಶ್ ಬನ್ನೂರು ಸೇರಿದಂತೆ ಹಲವು ಗಣ್ಯರು ಆಗಮಿಸಿ ಮಕ್ಕಳಿಗೆ ಮತ್ತು ಪೋಷಕರಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಾಲಕೃಷ್ಣ ನಾಯಕ್, ಡಾ. ಉದಯಕೃಷ್ಣ ಮತ್ತು ಪ್ರೊ. ಸೀತಾರಾಮ ಕೇವಳ ಅವರು, ನಮ್ಮ ಅನೇಕ ಪ್ರಾಚೀನ ವಿದ್ಯೆಗಳ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಕ್ಕಳಲ್ಲಿ ಶಿಸ್ತು ಮತ್ತು ಜ್ಞಾನದ ಬಗ್ಗೆ ಪ್ರೇರಣೆ ನೀಡಿದರು.





















































 
 

ಶಿಬಿರದ ತರಬೇತುದಾರರು ಮತ್ತು ಸಮನ್ವಯಕಾರರಾದ ಶ್ರೀ ಗಿರೀಶ್ ಬೆಂಗಳೂರು ಅವರು, ‘ಜ್ಞಾನ ಚಕ್ಷು’ ತರಬೇತಿಯ ವಿಧಾನ ಮತ್ತು ಮಕ್ಕಳ ಮೇಲೆ ಅದರ ಧನಾತ್ಮಕ ಪರಿಣಾಮಗಳ ಕುರಿತು ವಿವರಿಸಿದರು. ‘ಜ್ಞಾನ ಚಕ್ಷು’ ಶಿಬಿರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಪ್ರದರ್ಶಿಸಿದ ಅತ್ಯದ್ಭುತ ಸ್ಮರಣಶಕ್ತಿ ಸಾಮರ್ಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

error: Content is protected !!
Scroll to Top