ಎನ್. ಎಸ್. ಎಸ್. ಕಾರ್ಯ ಚಟುವಟಿಗಳ ಉದ್ಘಾಟನೆ ಸವಣೂರು ವಿದ್ಯಾರಶ್ಮಿ ಕಾಲೇಜಿನಲ್ಲಿ ನಡೆಯಿತು.
NSS ದಿನಾಚರಣೆಯು ಸವಣೂರು ವಿದ್ಯಾರಶ್ಮಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ನಮ್ಮ ಚಟುವಟಿಕೆಗಳ ಆರಂಭದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ಸಾಕಷ್ಟು NSS ಕ್ಯಾಂಪ್ ಗಳ ಮೆಲುಕು ಹಾಕಿದರು ವಿದ್ಯಾರ್ಥಿಗಳು ಸ್ಯಚ್ಚತೆ ಬಗ್ಗೆ ಕಾಳಜಿ ವಹಿಸಿ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಹೇಳಿದರು. NSS ರಾಷ್ಟ್ರ ದ ನಿರ್ಮಾಣ ಮಾಡಿದರೆ NSS ರಾಷ್ಟ್ರದ ರಕ್ಷಣೆ ಮಾಡುತ್ತದೆ ಎಂದು ಶ್ರೀ ವೆಂಕಟರಮಣ ರವರು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷೆ ರಾಜಲಕ್ಷ್ಮೀ ಎಸ್ ರೈ ಮಾತಾನಾಡಿ, ನೀನು ನಿನ್ನ ದಾರಿಯಲ್ಲಿ ಸಾಗು ಆಗ ಜಗತ್ತು ಅದನ್ನು ಹಿಂಬಾಲಿಸುತ್ತದೆ ಎಂದು ಜೆ.ಪಿ ರಾಜರತ್ನರವರ ಮಾತುಗಳನ್ನು ಹೇಳುತ್ತಾ ನಿಮ್ಮಲ್ಲಿ ಶಿಸ್ತು , ಸ್ವಚ್ಚತೆಯ ಅರಿವು ಮಾಡಿದರೆ ನಿಮ್ಮಲ್ಲಿ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ನಾನು ಕಟೀಲು ಕಾಲೇಜಿನಲ್ಲಿ ಇದ್ದಾಗ ದೇವರ ಗುಡ್ಡ NSS ಕ್ಯಾಂಪ್ ನ ದಿನಗಳನ್ನು ಮೆಲುಕು ಹಾಕಿ ಆಗ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ನಮ್ಮ ತಂಡದಲ್ಲಿದ್ದು ಹೆಚ್ಚಿನ ಶ್ರಮ ಹಾಕಿ ಬದುಕಿನ ಸವಾಲುಗಳನ್ನು ಎದುರಿಸುವ ನೈತಿಕತೆ NSS ಮೂಲಕ ದೊರಕುತ್ತದೆ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಹರಿಪ್ರಸಾದ್ ಮಾತಾನಾಡಿ NSS ಎಂಬುದು ಕೇವಲ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿಲ್ಲ ಇಲ್ಲಿ ಎಲ್ಲರೂ NSS ಸ್ಯಯಂ ಸೇವಕರೇ ರಾಷ್ಟ್ರ ಭಕ್ತಿ , ರಾಷ್ಟ್ರ ಸೇವೆಯು NSS ಮೂಲಕ ಹೆಚ್ಚು ಜಾಗೃತಿಯಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ನುಡಿ , ಶಿಸ್ತು , ಸಮಯದ ಪರಿಪಾಲನೆ ಅಗತ್ಯ ಉದ್ಯೋ ಗ ಕ್ಷೇತ್ರ ದಲ್ಲಿ ಇಂದು ತುಂಬಾ ಸ್ಪರ್ಧೆ ಗಳಿದ್ದು ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಬೇಡಿಕೆಗೆ ತಕ್ಕ ಶಿಕ್ಷಣಗಳು ಲಭಿಸುತ್ತಿದ್ದರೆ ಅವಕಾಶಗಳ ಕೊರತೆಯಿಂದ ವಿದ್ಯಾರ್ಥಿಗಳು ಸೊರಗುತ್ತಿದ್ದಾರೆ. ನಿರಂತರ ಜ್ಞಾನದ ದಾಹ, ವ್ಯಕ್ತಿ ಬದ್ಧತೆಯನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
























