ಗಮಕ ವಾಚನ ಸ್ಪರ್ಧೆಯಲ್ಲಿ ಜಿಡೆಕಲ್ಲಿನ ಪ್ರಥಮ ದರ್ಜೆ ಕಾಲೇಜು ಜಿಲ್ಲಾಮಟ್ಟಕ್ಕೆ

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹಯೋಗದಲ್ಲಿ ಜಿಲ್ಲಾ ಗಮಕ ಕಲಾ ಸಮ್ಮೇಳನದ ಅಂಗವಾಗಿ ‘ಗಮಕ ವಾಚನ’ ಸ್ಪರ್ಧೆಯನ್ನು ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು ಮತ್ತು ದ.ಕ ಜಿಲ್ಲೆಯ ಪುತ್ತೂರು ಘಟಕ ಆಯೋಜಿಸಿದ್ದವು.

ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಥಮ ವಾಣಿಜ್ಯ ಪದವಿಯ ಮೇಘನಾ ಎನ್.ಎಸ್. ಮತ್ತು ರಶ್ಮಿ ವೈ. ಎಸ್. ಜಯಶಾಲಿಗಳಾಗಿದ್ದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತರನ್ನು ಕಾಲೇಜಿನ ಪ್ರಾಂಶುಪಾಲರಾದ Rtn. ಸುಬ್ಬಪ್ಪ ಕೈಕಂಬ ಮತ್ತು ಸಾಂಸ್ಕೃತಿಕ ಸಂಘ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಘಟಕದ ಸಂಚಾಲಕರಾದ ಪುಷ್ಪರಾಜ್‌ ಅಭಿನಂದಿಸಿದ್ದಾರೆ.





















































error: Content is protected !!
Scroll to Top