ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣದ ಪ್ರಮುಖ ವ್ಯಕ್ತಿ ದೂರುದಾರ ಮಾಸ್ಕ್ಮ್ಯಾನ್ ಚೆನ್ನಯ್ಯನ ಬಂಧನವನ್ನು ಗಿರೀಶ್ ಮಟ್ಟಣ್ಣನವರ್ ಸ್ವಾಗತಿಸಿದ್ದಾರೆ.
ಚೆನ್ನಯ್ಯನ ಬಂಧನ ಉತ್ತಮ ಬೆಳವಣಿಗೆ. ಆತನನ್ನು ಬಂಧಿಸಿದಕೆ ಸಾಲದು. ಆತನ ಮಂಪರು ಪರೀಕ್ಷೆ ಸಹ ಮಾಡಬೇಕು ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಎಲ್ಲಾ ಷಡ್ಯಂತ್ರಗಳ ಉತ್ತರವನ್ನು SIT ಅಧಿಕಾರಿಗಳೇ ಕೊಡುತ್ತಾರೆ. ಇಲ್ಲಿ ನನ್ನ ಹೆಸರೂ ಸಹ ಬರಬಹುದು. SIT ಅಧಿಕಾರಿಗಳು ಕರೆದರೆ ನಾನು ಅವನ ಮತ್ತು ನನ್ನ ನಡುವೆ ಏನು ಸಂಬಂಧ ಇದೆ ಎನ್ನುವುದನ್ನು ತಿಳಿಸುತ್ತೇನೆ ಎಂದಿದ್ದಾರೆ.
























