ಅಕ್ಷಯ ಕೆರಿಯರ್ ಅಕಾಡೆಮಿ ಹಾಗೂ ಮಂಗಳೂರು ಕೆರಿಯರ್ ಡೆಸ್ಟಿನಿಯಿಂದ ಪುತ್ತೂರಿನಲ್ಲಿ  ಎರಡನೇ ಬ್ಯಾಚ್ ಏವಿಯೇಶನ್  ಮತ್ತು ಸ್ಯಾಪ್ (SAP) ಕೋರ್ಸ್ ತರಬೇತಿ ಆರಂಭ

ಪುತ್ತೂರು: ಅಕ್ಷಯ ಕೆರಿಯರ್ ಅಕಾಡೆಮಿ ಮತ್ತು ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಹಯೋಗದಲ್ಲಿ ಪುತ್ತೂರಿನ ದರ್ಬೆ ಆರಾಧ್ಯ ಆರ್ಕೆಡ್‍ ನಲ್ಲಿ ಒಂದು ವರ್ಷದ ಡಿಪ್ಲೊಮಾ ಇನ್ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಕೋರ್ಸಿನ ಎರಡನೇ ಬ್ಯಾಚ್ ಮತ್ತು ಸ್ಯಾಪ್  ಕೋರ್ಸ್ ಬ್ಯಾಚ್ ಆರಂಭಿಸಲಾಯಿತು.

ಹೊಸ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭ ಅಕ್ಷಯ ಕಾಲೇಜಿನ ಚೇರ್ಮೆನ್ ಜಯಂತ್ ನಡುಬೈಲು ಮಾತನಾಡಿ, ದರ್ಬೆ ಬೈಪಾಸ್ ರಸ್ತೆಯ ಫಾ.ಪತ್ರಾವೋ ಸರ್ಕಲ್ ಬಳಿಯ ಆರಾಧ್ಯ ಆರ್ಕೇಡ್‍ ನ ಮೂರನೇ ಮಹಡಿಯಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‍ ನಡಿಯಲ್ಲಿ ಅಕ್ಷಯ ಕಾಲೇಜು ಹಾಗೂ ಕೆರಿಯರ್ ಡೆಸ್ಟಿನಿ ಮಂಗಳೂರು ಜಂಟಿ ಸಹಯೋಗದಲ್ಲಿ ‘ಅಕ್ಷಯ ಕೆರಿಯರ್ ಅಕಾಡೆಮಿ’ ಸಂಸ್ಥೆಯನ್ನು ಸ್ಥಾಪಿಸಿ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಏವಿಯೇಶನ್, ಸ್ಯಾಪ್, ಬ್ಯಾಟ್ ಅಲ್ಪಾವಧಿ ಕೋರ್ಸ್‍ ಗಳನ್ನು ಹುಟ್ಟು ಹಾಕಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪುವಿಕೆಗೋಸ್ಕರ ಉದ್ಯೋಗಪೂರಕ ವೃತ್ತಿಪರ ಕೋರ್ಸ್‍ ಗಳು ಪ್ರಾರಂಭವಾಗಿದೆ. ನಮಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿವಿಧ ಕೋರ್ಸ್‍ ಗಳ ಮೂಲಕ ಉದ್ಯೋಗಾವಕಾಶಗಳನ್ನು ಪಡೆಯಬಹುದು ಮತ್ತು ನಾವು ಉತ್ತಮ ಪ್ರೋತ್ಸಾಹ ನೀಡಿ ಉದ್ಯೋಗ ಪಡೆಯಲು ಪ್ರೇರೇಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮಂಗಳೂರು ಕೆರಿಯರ್ ಡೆಸ್ಟಿನಿ ಮುಖ್ಯಸ್ಥೆ ಜಯಶ್ರೀ ಮಾತನಾಡಿ, ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆಯಿಂದ ಬಂದು ಇಲ್ಲಿನ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏವಿಯೇಶನ್ ಶಿಕ್ಷಣವನ್ನು 2021ರಿಂದಲೇ ಪ್ರಾರುಂಭಿಸಿದ್ದು, ಹಿಂದಿನ ಬ್ಯಾಚಿನ ವಿದ್ಯಾರ್ಥಿಗಳು ಇದೀಗ ಬೆಂಗಳೂರು ಮತ್ತು ಮಂಗಳೂರಿನ ಏರ್ಪೋರ್ಟ್ನಲ್ಲಿ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪದವಿ ನಂತರ ಪ್ರೊಫೆಶನಲ್ ಕೋರ್ಸ್ ಕಲಿಯುವುದು ಬಹಳ ಮುಖ್ಯ ,ಪಿಯುಸಿ ಆದವರಿಗೆ ಒಂದು ವರ್ಷ ಹಾಗೂ ಪದವಿ ಆದವರಿಗೆ ಆರು ತಿಂಗಳ ಈ ಏವಿಯೇಶನ್ ಕೋರ್ಸ್‍ ಮಾಡಬಹುದಾಗಿದೆ ಎಂದರು.





















































 
 

ಜುಂಬಾ ಪ್ರಮಾಣೀಕೃತ ಫಿಟೆಸ್ ತರಬೇತುದಾರ ದೇವಿಪ್ರಸಾದ್ ಮಾತನಾಡಿ, ವಾಯುಯಾನ ಕ್ಷೇತ್ರದಲ್ಲಿ ಅಗತ್ಯವಿರುವ ಜ್ಞಾನ ,ಕೌಶಲ್ಯ ಮತ್ತು ಫಿಟೆಸ್ ಪ್ರಮುಖ ಅಂಶಗಳ ಬಗ್ಗೆ ವಿವರಿಸಿದರು. ಮಾನವ ಸಂಪನ್ಮೂಲ ವ್ಯವಸ್ಥಾಪಕ ಭರತ್ ಒಲ್ತಾಜೆ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಚ್ ಆರ್ ಕೋ ಆರ್ಡಿನೇಟರ್ ಯಾಮಿನಿ ಉಪಸ್ಥಿತರಿದ್ದರು.

ಪಿಯುಸಿ/ಪದವಿ ಬಳಿಕ ಮುಂದೇನು?..

ವಿದ್ಯಾರ್ಥಿಗಳು ಪಿಯುಸಿ ಅಥವಾ ಬಿಎಸ್ಸಿ, ಬಿಕಾಂ, ಬಿಎ ಹೀಗೆ ಮೂರು ವರ್ಷಗಳ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ತನ್ನ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಚಿಂತೆ ಕಾಡುವುದು ಸಹಜ. ಉನ್ನತ ಹಾಗೂ ಪ್ರತಿಷ್ಠಿತ ಹುದ್ದೆಯಾದ ವಾಯುಯಾನ(ಏವಿಯೇಶನ್) ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಕೋರ್ಸ್ ನ್ನು ಪೂರೈಸಲು ಮಂಗಳೂರು ಹೀಗೆ ದೂರದ ಊರಿಗೆ ಪಯಣಿಸಬೇಕಿತ್ತು. ಇದೀಗ ಪುತ್ತೂರಿನ ಅಕ್ಷಯ ಕಾಲೇಜು ವಾಯುಯಾನ(ಏವಿಯೇಶನ್) ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಡಿಪ್ಲೋಮಾ ಮತ್ತು SAP ಕೋರ್ಸ್‍  ಪುತ್ತೂರಿನಲ್ಲಿ ಪರಿಚಯಿಸಿದ್ದು ವಿದ್ಯಾರ್ಥಿಗಳ ಚಿಂತೆಯನ್ನು ದೂರ ಮಾಡಿದೆ.

error: Content is protected !!
Scroll to Top