ಹುಬ್ಬಳ್ಳಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ್ ಕೊಲೆ ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹುಬ್ಬಳ್ಳಿಯ ಒಂದನೇ ಮತ್ತು ಸತ್ರ ನ್ಯಾಯಾಲಯ ರದ್ದು ಮಾಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಲ್ಲವಿ ಬಿ. ಆರ್. ಅವರು ಮಹತ್ವದ ಆದೇಶ ನೀಡಿರುವುದಾಗಿದೆ.
ಆರೋಪಿ ಪರ ವಕೀಲರು ‘ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಜಾಮೀನು ನೀಡಲಾದಂತೆಯೇ ಫಯಾಜ್ಗೂ ಜಾಮೀನು ನೀಡಿ ಎಂದು ಕೋರ್ಟ್ ಗೆ ತಿಳಿಸಿದ್ದರು. ಆದರೆ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿದ್ದು, ಆ 6 ರಂದು ಫಯಾಜ್ ಖುದ್ದಾಗಿ ಕೋರ್ಟ್ಗೆ ಹಾಜರಾಗುವಂತೆ ಆಜ್ಞೆ ಮಾಡಿದೆ.
























