ಪುತ್ತೂರು: ಕರ್ಮಲ, ಬೊಳ್ವಾರು ನಿವಾಸಿ ದಿ. ನೇಮಣ್ಣ ಗೌಡ ಇವರ ಧರ್ಮಪತ್ನಿ ಗಿರಿಜಾ ಅವರು ಆ. 2 ರಂದು ನಿಧನರಾದರು.
ಅವರಿಗೆ 92 ವರ್ಷವಾಗಿದ್ದು ಕಳೆದ ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಮೇರ್ಲದಲ್ಲಿರುವ ತಮ್ಮ ಪುತ್ರನ ಮನೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪುತ್ರರಾದ ಸುರೇಶ್ ಗೌಡ, ಸತೀಶ್ ಪಿ., ರಾಜೇಶ್ ಕುಮಾರ್, ಪುತ್ರಿಯರಾದ ಯಶೋಧ, ವಿನೋದ, ಸರೋಜ, ಸೊಸೆಯಂದಿರಾದ ವಿಲಾಸಿನಿ ಸುಂದರ ಗೌಡ, ಉಷಾಕಿರಣ್, ಪ್ರತಿಮಾ ಸತೀಶ್, ಮಮತಾ ರಾಜೇಶ್ ಮತ್ತು ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ.
























