ಟಿ.ಬಿ.ಖಾಯಿಲೆಯಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

ಕೊಕ್ಕಡ: ಟಿ.ಬಿ.ಖಾಯಿಲೆಯಿಂದ ಮನನೊಂದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು.6ರಂದು ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ.
ಕಾಪಿನಬಾಗಿಲಿನ ಅಂಬೋಡಿ(45) ಎಂಬವರು ಟಿ.ಬಿ.ಖಾಯಿಲೆಯಿಂದ ಬಳಲುತ್ತಿದ್ದು ಕಳೆದ ಎರಡು ವಾರದ ಹಿಂದೆ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜು.4ರಂದು ಆಸ್ಪತ್ರೆಯಿಂದ ಮನೆಗೆ ಬಂದು ವಿಶ್ರಾಂತಿಯಲ್ಲಿದ್ದರು. ಆದರೆ ಜು.6ರಂದು ಖಾಯಿಲೆ ಉಲ್ಬಣಗೊಂಡಾಗ ರಾತ್ರಿ 11:30ಕ್ಕೆ ಮನೆಯ ಮುಂಬಾಗಿನ ಚಿಲಕ ಹಾಕಿ ಅಂಗಳದಲ್ಲಿರುವ ಬಾವಿಗೆ ಹಾರಿದ್ದಾರೆ. ಶಬ್ದ ಕೇಳಿ ಎಚ್ಚರಗೊಂಡ ಅವರ ಪತ್ನಿವಿನಯ ಅವರು ಅಂಬೋಡಿಯವರ ತಮ್ಮನ ಮಗ ಅವಿನಾಶ್ ಗೆ ವಿಚಾರ ತಿಳಿಸಿ ಸ್ಥಳಕ್ಕೆ ಬಂದಾಗ ಅಂಬೋಡಿಯವರು ತನ್ನ ಲುಂಗಿ ಮತ್ತು ಟಾರ್ಚ್ ಅನ್ನು ಬಾವಿಯ ದಂಡೆಯಲ್ಲಿಟ್ಟು ಬಾವಿಗೆ ಹಾರಿದ್ದಾರೆ.

ಅಂಬೋಡಿಯವರು ತನಗಿರುವ ಖಾಯಿಲೆಯಿಂದ ಬದುಕಿನಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಮೃತಪಟ್ಟಿದ್ದಾರೆಂದು ಅವಿನಾಶ್ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದೆ.





















































error: Content is protected !!
Scroll to Top