ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡು ನುಂಗಿದ್ದ ಹಸುಳೆ
ಮಂಗಳೂರು: ಬೀಡಿಯ ತುಂಡು ನುಂಗಿ 10 ತಿಂಗಳು ಪ್ರಾಯದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರು ಸಮೀಪ ಅಡ್ಯಾರ್ನಲ್ಲಿ ಸಂಭವಿಸಿದೆ. ಅಡ್ಯಾರ್ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಅನೀಶ್ ಕುಮಾರ್ ಸಾವನ್ನಪ್ಪಿರುವ ನತದೃಷ್ಟ ಮಗು.
ಕಳೆದ ಶನಿವಾರ ಮಧ್ಯಾಹ್ನ 1.30ರ ವೇಳೆಗೆ ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ಮಗು ನುಂಗಿದೆ. ಅಸ್ವಸ್ಥಗೊಂಡ ಮಗುವನ್ನು ಸಂಜೆ ವೇಳೆಗೆ ವೆನ್ಲಾಕ್ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಮಗು ಸಾವನ್ನಪ್ಪಿದೆ.
ಗಂಡನ ನಿರ್ಲಕ್ಷ್ಯದಿಂದಲೇ ಹಸುಳೆ ಸಾವನ್ನಪ್ಪಿದೆ. ಮನೆಯೊಳಗೆ ಬೀಡಿ ಸೇದದಂತೆ ಹಲವು ಬಾರಿ ಹೇಳಿದರೂ ಗಂಡ ಕೇಳುತ್ತಿರಲಿಲ್ಲ ಎಂದು ಮಗುವಿನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.