ಗುಡ್ಡ ಕುಸಿತದಿಂದ ಹಾನಿ : 5.70 ಲಕ್ಷ ರೂ. ಪರಿಹಾರ ವಿತರಣೆ

ಪುತ್ತೂರು: ಈ ಬಾರಿಯ ಮಳೆಯ ಆರಂಭದಲ್ಲಿ ಮಳೆಯ ತೀವ್ರತೆಯಿಂದ 82 ಮನೆಗಳು ಭಾಗಶಃ ಹಾನಿಗೊಳ ಗಾಗಿದ್ದು, ಈ ಮನೆಗಳಿಗೆ ತಲಾ ರೂ.6500ನಂತೆ ಒಟ್ಟು ರೂ.533000 ಪ್ರಾಕೃತಿಕವಿಕೋಪ ಹಿನ್ನಲೆಯಲ್ಲಿ ಪರಿಹಾರವನ್ನು ಪುತ್ತೂರು ತಹಶೀಲ್ದಾರ್ ನಾಗರಾಜ್ ಅವರು ವಿತರಣೆ ಮಾಡಿದ್ದಾರೆ.

ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿತ್ತು. ತಾಲೂಕಿನಲ್ಲಿ 3 ದನದ ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದ್ದು, ಇದಕ್ಕೆ ಸಂಬಂಧಿಸಿ ತಲಾ 3000 ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ 22 ಬೆಳೆಹಾನಿ ಪ್ರಕರಣಗಳ ವರದಿಯಾಗಿದ್ದು, ಶೇ33ಕ್ಕಿಂತ ಹೆಚ್ಚು ಬೆಳೆಹಾನಿಯಾದ ಸಂದರ್ಭದಲ್ಲಿ ಮಾತ್ರ ಪರಿಹಾರ ನೀಡಲು ಅವಕಾಶವಿದ್ದು, ಈ ಹಿನ್ನಲೆಯಲ್ಲಿ ಈ ಪ್ರಕರಣಗಳನ್ನು ಪರಿಶೀಲನೆಗೆಗಾಗಿ ತೋಟಗಾರಿಕಾ ಇಲಾಖೆಗೆ ಸೂಚನೆ ನೀಡಲಾಗಿದೆ.

ಈ ಸಂಬಂಧ ಪರಿಶೀಲನೆಯ ನಂತರ ಪರಿಹಾರಧನ ವಿತರಣೆ ನಡೆಸಲಾಗುವುದು ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಎಲ್ಲಾ ಪ್ರಕರಣಗಳಿಗೆ 5,70,900 ರೂ. ಪರಿಹಾರಧನವನ್ನು ವಿತರಣೆ ಮಾಡಲಾಗಿದೆ.



















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top