ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಆಶ್ರಯದಲ್ಲಿ ಆ.:8 ಶುಕ್ರವಾರ ನಡೆಯಲಿರುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸುಭದ್ರಾ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು.

ವರಮಹಾಲಕ್ಷ್ಮಿ ಪೂಜೆಯ ಸಮಿತಿ ಗೌರವಾಧ್ಯಕ್ಷರಾಗಿ ರಜತಾ ಗಿರೀಶ್ ಭಟ್, ಗೌರವ ಸಲಹೆಗಾರರಾಗಿ ಶಾರದಾ ಪ್ರಭು, ಕಿಶೋರಿ ಕಿಶೋರ್, ಸಂಚಾಲಕರಾಗಿ ಪುಷ್ಪ ರಾಜೇಶ್, ಅಧ್ಯಕ್ಷರಾಗಿ ಪ್ರೇಮಾ ರೈ, ಪ್ರಧಾನ ಕಾರ್ಯದರ್ಶಿಯಾಗಿ ಅನ್ನಪೂರ್ಣ ಬಲ್ಲಾಳ್, ಉಪಾಧ್ಯಕ್ಷರಾಗಿ ಪವಿತ್ರ, ವೀಣಾ, ಸ್ಮಿತಾ, ಪ್ರೇಮ ಮುಂಡೂರು, ರಾಜೀವಿ, ಕಾರ್ಯದರ್ಶಿಗಳಾಗಿ ಪುಷ್ಪ ಆಚಾರ್ಯ, ಸ್ವಾತಿ, ವಿನಯ, ಅರುಣಾ, ತಾರಾ ಬಲ್ಲಾಳ್, ಶ್ವೇತಾ ಹಾಗೂ 50 ಕ್ಕೂ ಹೆಚ್ಚು ಮಹಿಳಾ ಸದಸ್ಯರನ್ನು ನೇಮಕ ಮಾಡಲಾಯಿತು
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಮಹೇಂದ್ರವರ್ಮ ಬಜತ್ತೂರು, ನಿರ್ದೇಶಕರಾದ ಉಮೇಶ್ ಗೌಡ ಕೋಡಿಬೈಲು, ಅನಿಲ್ ಗೌಡ ತೆಂಕಿಲ, ಸದಸ್ಯರುಗಳಾದ ಮನೀಶ್, ಹರೀಶ್ ಮರುವಾಳ, ಸುಜಿತ್ ಕಜೆ, ಗಣೇಶ್ ಮುಕ್ರಂಪಾಡಿ, ಉದಯ ಬಲ್ಲಾಳ್, ಗಿರೀಶ್ ನರಿಮೊಗರು, ಹರೀಶ್ ಮುಂಡೂರ್, ಪ್ರವೀಣ್ ಶೆಟ್ಟಿ ತಿಂಗಳಾಡಿ, ಮಂಜುನಾಥ ಕೆದಂಬಾಡಿ, ಮಹಾಬಲ ಕೆಮ್ಮಾಯಿ, ಶ್ಯಾಮ್ ರಕ್ತೇಶ್ವರಿ, ಜಯಂತ ರಕ್ತೇಶ್ವರಿ, ಕಿಶೋರ್ ನಗರ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.