ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು  ಮಹತ್ವಪೂರ್ಣವಾಗಿ ಆಚರಿಸಲಾಯಿತು.

ಸಸ್ಯಾಶಾಸ್ತ್ರ, ಪ್ರಾಣಿಶಾಸ್ತ್ರ, ವಿಭಾಗ ಹಾಗೂ ಇಕೋಕ್ಲಬ್‍ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ತಾಲೂಕು ಪಂಚಾಯಿತಿ ಉಪನಿರ್ದೇಶಕ ವಿಲ್ಫ್ರೆಡ್,  ರೋಡ್ರಿಗಸ್‍ ಮಾತನಾಡಿ,  ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್‍ ತ್ಯಾಜ್ಯ ಹಾಗೂ ಇತರೆ ಅವ್ಯಯ ಉತ್ಪನ್ನಗಳ ಅಕ್ರಮ ನಾಶದ ಪರಿಣಾಮದ ಬಗ್ಗೆ ಮಾಹಿತಿನೀಡಿದರು.

















































 
 

ಕಾಲೇಜಿನ ಪ್ರಾಚಾರ್ಯ ವಂ.ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಅಗತ್ಯತೆಯನ್ನು ತಿಳಿಸಿ, ಸಮೃದ್ಧ ಪರಿಸರದತ್ತ ಹೆಜ್ಜೆ ಹಾಕಲು ಸಣ್ಣಸಣ್ಣ ಕ್ರಮಗಳನ್ನು ಕೈಗೊಳ್ಳುವುದು ಬಹುಮುಖ್ಯ ಎಂದರು.

ಉಪನ್ಯಾಸಕಿ ಶಶಿಪ್ರಭಾ ಬಿ. ಪ್ರಸ್ತಾವಿಕವಾಗಿ ಮಾತನಾಡಿ, ಅನಗತ್ಯ ಪ್ಲಾಸ್ಟಿಕ್‍ ಬಳಕೆಯನ್ನು ನಿಲ್ಲಿಸುವ ಮೂಲಕ ಬದಲಾವಣೆಯ ಪ್ರಬಲ ಶಕ್ತಿರೂಪುಗೊಳ್ಳಬಹುದು ಎಂದರು.

ಡಾ.ನವೀನಚಂದ್ರ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ವಿಜ್ಞಾನ ವಿಭಾಗದ ಡೀನ್‍ ಮಾಲಿನಿ ಕೆ., ಹಣಕಾಸು ಅಧಿಕಾರಿ ಡಾ. ಎಡ್ವಿನ್‍ ಡಿಸೋಜಾ, ಸಸ್ಯಾಶಾಸ್ತ್ರ ಉಪನ್ಯಾಸಕಿ ಸ್ಮಿತಾ ವಿವೇಕ್, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀರಕ್ಷಾಬಿ.ವಿ., ಮತ್ತು ಜೀವಶಾಸ್ತ್ರ ಉಪನ್ಯಾಸಕಿ ಶಿವಾನಿ ಮಲ್ಲ್ಯ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಿಯಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು, ಪ್ರಾಧ್ಯಾಪಕಿ ಪ್ರತಿಭಾ ವಂದಿಸಿದರು. ಬಳಿಕ ಪರಿಸರ ಸಂರಕ್ಷಣೆಯ ಪ್ರತೀಕವಾಗಿ ಕಾಲೇಜು ಪ್ರಾಂಗಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top