ಯುವ ಯಕ್ಷಗಾನ ಕಲಾವಿದೆ, ಬಾಸ್ಕೆಟ್ಬಾಲ್ ಕ್ರೀಡಾಪಟು
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಉಡುಪಿಯ ಹೆಬ್ರಿ ಮೂಲದ ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ಯುವ ಯಕ್ಷಗಾನ ಕಲಾವಿದೆ, ಬಾಸ್ಕೆಟ್ ಬಾಲ್ ಕ್ರೀಡಾಪಟು ಚಿನ್ಮಯಿ ಶೆಟ್ಟಿ (19) ಮೃತಪಟ್ಟವರು.
ಪ್ರಸ್ತುತ ಬೆಂಗಳೂರು ತಿಪ್ಪಸಂದ್ರ ನಿವಾಸಿಗಳಾದ ಹೆಬ್ರಿ ಕರುಣಾಕರ ಶೆಟ್ಟಿ ಮತ್ತು ಉಪ್ಪಿನಂಗಡಿ ಪೂಜಾ ಶೆಟ್ಟಿಯವರ ಪುತ್ರಿ ಕು.ಚಿನ್ಮಯಿ ಶೆಟ್ಟಿ. ಅವರು ಬೆಂಗಳೂರಿನ ಕನಕಪುರ ಮಾರ್ಗದ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ‘ಯಕ್ಷತರಂಗ ಬೆಂಗಳೂರು’ನ ಯಕ್ಷಗಾನ ಕಲಿಯುತ್ತಿದ್ದರು. ಜೊತೆಗೆ ಚಿನ್ಮಯಿ ಶೆಟ್ಟಿ ಅವರು ಪ್ರತಿಭಾವಂತ ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿದ್ದರು.