ನಳಿಲು ಸಂತೋಷ್ ಕುಮಾರ್ ರೈಯವರಿಗೆ ಸನ್ಮಾನ

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಭದ್ರತಾ ಕೋಶವನ್ನು ಸೇವಾ ರೂಪದಲ್ಲಿ ಅರ್ಪಿಸಲು ದೊರೆತ ಅವಕಾಶ ನನ್ನ ಭಾಗ್ಯವೆಂದು  ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ ಕುಮಾರ್ ರೈ ತಿಳಿಸಿ ದೇವಾಲಯದ ಭಕ್ತರ ಸಹಕಾರದಿಂದ ಇನ್ನಷ್ಟು ಕೊಡುಗೆಗಳು ಕ್ಷೇತ್ರಕ್ಕೆ ಒದಗಿ ಬರಲಿಯೆಂದು ಹಾರೈಸಿದರು.

ಶ್ರೀ ನಳಿಲು ಕ್ಷೇತ್ರದಲ್ಲಿ    ಬಾರ್ಯ ದೇವಾಲಯದ ಆಡಳಿತ ಸೇವಾ ಟ್ರಸ್ಟ್ ವತಿಯಿಂದ  ಅವರನ್ನು ಈ ಕೊಡುಗೆಗಾಗಿ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.   ಟ್ರಸ್ಟ್ ಅಧ್ಯಕ್ಷ  ಭಾಸ್ಕರ ಬಾರ್ಯ ಪುತ್ತೂರು ಮತ್ತು ಶ್ರೀ ನಳಿಲು ಕ್ಷೇತ್ರದ ಅರ್ಚಕರಾದ  ಪ್ರವೀಣ್ ಶಂಕರ್  ಅವರು ಸಂತೋಷ ಕುಮಾರ್ ರೈ ದಂಪತಿಯನ್ನು ಸನ್ಮಾನಿಸಿದರು.

ವೇದಿಕೆಯಲ್ಲಿ  ಡಾ.ವೀಣಾ ಸಂತೋಷ್ ರೈ ,ಡಾ. ಸುಚೇತ  ಜೆ ಶೆಟ್ಟಿ, ಸುರೇಶ್ ರೈ, ವಿದ್ಯಾ ಪ್ರಭಾಕರ್ ಬಾರ್ಯ,ಪ್ರಿಶಾ ರೈ, ಸಾನ್ವಿ ರೈ ಉಪಸ್ಥಿತಿತರಿದ್ದರು .

















































 
 

ಭಾಸ್ಕರ್ ಬಾರ್ಯ  ಸ್ವಾಗತಿಸಿ  ಬಾರ್ಯ ದೇವಳದ ಟ್ರಸ್ಟ್ ಸದಸ್ಯರಾದ   ಶ್ರೀಮತಿ ನವೀನ ಬಾರ್ಯ ಸನ್ಮಾನ ಪತ್ರವಾಚಿಸಿದರು. ಶ್ರೀಮತಿ ವಿಜಯಲಕ್ಷ್ಮಿರೈ ಬಾರ್ಯ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top