ಪೆಟ್ರೋಲ್ ಹಾಕಿ ಹಣ ನೀಡದೇ ಪರಾರಿಯಾದ ಯುವಕರು | ಪರಾರಿಯಾಗುವ ಭರದಲ್ಲಿ ಅಪಘಾತ, ಪೊಲೀಸ್‍ ವಶಕ್ಕೆ

ವಿಟ್ಲ:ಪೆಟ್ರೋಲ್‍ ಬಂಕ್‍ ಗೆ ಆಲ್ಟೋ ಕಾರಿನಲ್ಲಿ ಬಂದ ಇಬ್ಬರು ಮದ್ಯ ವ್ಯಸನಿಗಳು ಪೆಟ್ರೋಲ್ ಹಾಕಿಸಿ ಹಣ ನೀಡದೇ ಪರರಾರಿಯಾದ ಸಂದರ್ಭ ಬೈಕ್‍ ಹಾಗೂ ಪಿಕಪ್‍ ವಾಹನಗಳಿಗೆ ಡಿಕ್ಕಿಯಾಗಿ ಸಿಕ್ಕಿಬಿದ್ದ ಘಟನೆ ಮಂಗಳವಾರ ಸಂಜೆ ವಿಟ್ಲ ಸಾಲೆತ್ತೂರು ಸಮೀಪದ ವಾಲ್ತಾಜೆಯಲ್ಲಿ ನಡೆದಿದೆ.

ಆರೋಪಿಗಳಿಬ್ಬರು ಹಿಂದಿ ಭಾಷಿಕರಾಗಿದ್ದು, ಪೆಟ್ರೋಲ್ ಹಾಕಿಸಿ ಹಣ ನೀಡದೇ ಸಾಲೆತ್ತೂರು ಮೂಲಕ ಪರಾರಿಯಾಗುತ್ತಿದ್ದಾಗ ಪಾಲ್ತಾಜೆಯಲ್ಲಿ ಆಕ್ಟಿವಾ ಮತ್ತು ಪಿಕಪ್ ವಾಹನಕ್ಕೆ ಆಲ್ಟೋ ಕಾರು ಢಿಕ್ಕಿಯಾಗಿದೆ.  ಆಕ್ಟಿವಾ ಸವಾರ ಕಟ್ಟತ್ತಿಲ ನಿವಾಸಿ ಅಬೂಬಕ್ಕರ್ ಗೆ  ಗಂಭೀರ ಗಾಯಗೊಂಡಿದ್ದಾರೆ.

ಸ್ಥಳಕ್ಕೆ 112ಪೊಲೀಸರು ಮತ್ತು ವಿಟ್ಲ ಪೊಲೀಸರು ಆಗಮಿಸಿ ಕಾರು ಹಾಗೂ ಮದ್ಯದ ನಶೆಯಲ್ಲಿ ತೆಲಾಡುತ್ತಿದ್ದ ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ



















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top