ಪುತ್ತೂರು: ಪ್ರಯಾಣಿಕರೋರ್ವರು ಕೆಎಸ್ ಆರ್ ಟಿಸಿ ಬಸ್ ನಿಂದ ಎಸೆಯಲ್ಪಟ್ಟ ಘಟನೆ ಸೋಮವಾರ ದರ್ಬೆಯಲ್ಲಿ ನಡೆದಿದೆ.
ದರ್ಬೆ ಜಂಕ್ಷನ್ ಬಳಿ ಪ್ರಯಾಣಿಕರೋರ್ವರು ಬಸ್ ಗೆ ಹತ್ತಿದ್ದರು. ಬಸ್ ಸ್ವಲ್ಪ ಮುಂದೆ ಹೋಗಿತ್ತಷ್ಟೇ, ಅಷ್ಟರಲ್ಲೇ ಪ್ರಯಾಣಿಕ ಬಸ್ ನಿಂದ ಎಸೆಯಲ್ಪಟ್ಟಿದ್ದಾರೆ.
ಗಾಯಗೊಂಡ ಅವರನ್ನು ಬಸ್ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು.