ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಶ್ರವಣಬೆಳಗೊಳ ಜಂಟಿಯಾಗಿ ಪ್ರಾಕೃತ ಸರ್ಟಿಫಿಕೇಟ್ ಮತ್ತು ಡಿಪ್ಲೋಮ ಕೋರ್ಸ್ನ ಫಲಿತಾಂಶ ಕಾರ್ಯಕ್ರಮ ನಡೆಯಿತು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಪ್ರಸಾದ. ಎನ್ ಹಾಗೂ ಇತಿಹಾಸ ಉಪನ್ಯಾಸಕಿ ನಮಿತಾ ಎಂ ಎ ಅವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷ ಕೆ.ಎಸ್. ಎಸ್ ಕಾಲೇಜಿನ ಪ್ರಾಕೃತ ಪ್ರವೇಶ ಮತ್ತು ಡಿಪ್ಲೋಮಾ ಕೋರ್ಸಿಗೆ ಉತ್ತಮ ಫಲಿತಾಂಶ ನಡೆಸಲಾಗುತ್ತದೆ.
ಈ ಕೋರ್ಸಿಗೆ 31 ವಿದ್ಯಾರ್ಥಿಗಳು ದಾಖಲಾಗಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ. ಪ್ರಾಕೃತ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಾದ ಅರ್ಪಿತ ಕೆ .ವಿ ಬೆಳ್ಳಿ ಮತ್ತು ಕಾವ್ಯ ಪಿ ಕಂಚು ಪದಕವನ್ನು ಪಡೆದಿದ್ದಾರೆ ಹಾಗೂ ಯಕ್ಷಿತ ನಾಲ್ಕನೇ ರಾಂಕ್ ಪಡೆದಿರುತ್ತಾರೆ. ಡಿಪ್ಲೋಮಾ ಪರೀಕ್ಷೆಯಲ್ಲಿ ಅನ್ವಿತಾ ಎಂ ಎನ್ ಮತ್ತು ವಿನುತಾ ಪಿ ನಾಲ್ಕನೇ ರಾಂಕ್, ಲಿಖಿತ ಡಿ.ಎನ್ 5ನೇ ರಾಂಕ್ ಪಡೆದಿರುತ್ತಾರೆ ಮತ್ತು 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 7 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು.