“ಫ್ರಮ್ ಆಲ್ಜಿಬ್ರಟು ಇಂಟೆಲಿಜೆನ್ಸ್: ದ ಮ್ಯಾಥಮೆಟಿಕಲ್ ಹಾರ್ಟ್ ಆಫ್ ಎಐ”- ಅತಿಥಿ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ, ಗಣಿತಶಾಸ್ತ್ರ ವಿಭಾಗ (ಯುಜಿ ಮತ್ತು ಪಿಜಿ) ಗಣಿತ ಹಾಗೂ ಕೃತಕ ಬುದ್ಧಿಮತ್ತೆ ನಡುವಿನ ಅಂತರ ಸಂಬಂಧವನ್ನು ಅರ್ಥೈಸುವ “ಫ್ರಮ್ ಆಲ್ಜಿಬ್ರ ಟು ಇಂಟೆಲಿಜೆನ್ಸ್: ದ ಮ್ಯಾಥಮೆಟಿಕಲ್ ಹಾರ್ಟ್ ಆಫ್ ಎಐ”- ಅತಿಥಿ ಉಪನ್ಯಾಸವನ್ನು ವಿದ್ಯಾರ್ಥಿಗಳಿಗೆ ಆಯೋಜಿಸಿತು.

ಸಂಪನ್ಮೂಲ ವ್ಯಕ್ತಿಗಳಾಗಿ ವಾಮಂಜೂರು ಸಂತ ಜೋಸೆಫ್‍ ಇಂಜಿನಿಯರಿಂಗ್‍ ಕಾಲೇಜು ಪ್ರಾಧ್ಯಾಪಕ ಡಾ ರಮಾನಂದ ಎಚ್.ಎಸ್ ಉಪನ್ಯಾಸ ನೀಡಿ, ಹೇಗೆ ಕೃತಕ ಬುದ್ಧಿಮತ್ತೆ ನಮ್ಮ ದೈನಂದಿನ ಜೀವನದಲ್ಲಿ ತಿಳಿದೋ ತಿಳಿಯದೆಯೋ ಒಳಗೊಂಡಿದೆ ಎಂಬುದನ್ನು ವಿವರಿಸಿದರು.

ಕಾಲೀಜಿನ ಪ್ರಾಂಶುಪಾಲ ವಂ. ಡಾ. ಆಂಟೋನಿ ಪ್ರಕಾಶ್ ಮೊಂತೆರೋ, ಕೃತಕ ಬುದ್ಧಿಮತ್ತೆಯ ಪ್ರಾಮುಖ್ಯತೆಯನ್ನು ವಿವರಿಸಿ, ಕೃತಕ ಬುದ್ಧಿಮತ್ತೆಯನ್ನು ಅರ್ಥೈಸಲು ಹೇಗೆ ಗಣಿತದ ಜ್ಞಾನ ಬಹಳ ಅಗತ್ಯವೆಂದರು.







https://screenapp.io/app/#/shared/8P4BcrrHNx























 
 

ಗಣಿತಶಾಸ್ತ್ರ ಸ್ನಾತಕೋತರ ವಿಭಾಗದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಸ್ನಾತಕೋತರ ವಿಭಾಗದ ಕೊ- ಆರ್ಡಿನೇಟರ್ ಪ್ರೊ ಗಣೇಶ್ ಭಟ್ ವಿದ್ಯಾರ್ಥಿಗಳ ಸಾಧನೆಯ ಕುರಿತು ತಿಳಿಸಿದರು.

ಸ್ನಾತಕೋತರ ವಿಭಾಗದ ವಿದ್ಯಾರ್ಥಿನಿ ನವ್ಯಶ್ರೀ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದಕ್ಕಾಗಿ ಗೌರವಿಸಲಾಯಿತು.

ಸಹಾಯಕ ಪ್ರಾಧ್ಯಾಪಕರುಗಳಾದ ವಾರಿಜಾ ಎಂ, ರಕ್ಷಿತಾ ಶೆಟ್ಟಿ, ದೀಪಿಕಾ, ಅಂಜು ಜೋಸೆಫ್ ಉಪಸ್ಥಿತರಿದ್ದರು. ಮಾನಸ ಮತ್ತು ತಂಡದವರು ಪ್ರಾರ್ಥನೆ ಹಾಡಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ತನುಜಾ ಎನ್.ಪಿ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರತೀಕ್ಷಾ, ವಂದಿಸಿದರು. ವಿದ್ಯಾರ್ಥಿನಿ ನೇಹಾ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top