ಅಂಬುಲ ತರವಾಡು ಮನೆಯಲ್ಲಿ ನಡೆದ ನಾಗದೇವರ, ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠೆ ಕಾರ್ಯಕ್ರಮ

ಅಂಬುಲ ತರವಾಡು ಮನೆ ಇವರಿಂದ ನಾಗದೇವರ, ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠೆ ಕಾರ್ಯಕ್ರಮ ಏ, 20ರಿಂದ ಏ,23ರವರೆಗೆ ನಡೆಯಿತು.

ಏ.20 ಭಾನುವಾರ ಸಂಜೆ 6 ಗಂಟೆಗೆ ನಾಗನ ಕಟ್ಟೆಯಲ್ಲಿ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಿಂಬಾದಿ ವಾಸ ಕಾರ್ಯಕ್ರಮ ನೆರವೇರಿತು.

ಏ.21 ಸೋಮವಾರ ಬೆಳಗ್ಗೆ 7 ಗಂಟೆಗೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ಬೆಳಗ್ಗೆ 9:30ರ ಶುಭ ಮುಹೂರ್ತದಲ್ಲಿ ನಾಗಪ್ರತಿಷ್ಠೆ, ನಾಗರಕ್ತೇಶ್ವರಿ, ಬೈರವ, ಗುಳಿಗ ದೈವಗಳ ಪ್ರತಿಷ್ಠೆ , ಕಲಶಾಭಿಷೇಕ, ಆಶ್ಲೇಷ ತಂಬಿಲ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.





























 
 

ಏ.22 ಮಂಗಳವಾರ ಸಂಜೆ 6 ಗಂಟೆಗೆ ಧರ್ಮದೈವ ಸಾನಿಧ್ಯದಲ್ಲಿ ಪ್ರಾಸಾದ ಪರಿಗ್ರಹಣ, ಪ್ರಾರ್ಥನೆ, ಸ್ಥಳಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಬಾಲ ಬಿಂಬಾಧಿವಾಸ, ಅನ್ನಪ್ರಸಾದ ನಡೆಯಿತು.

ಏ.23 ಬುಧವಾರ ಸಂಜೆ 7 ಗಂಟೆಗೆ ಗಣಹೋಮ ಬೆಳಗ್ಗೆ 8:05 ಕ್ಕೆ ಧರ್ಮದೈವದ ಪ್ರತಿಷ್ಠೆ, ಗೃಹಪ್ರವೇಶ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top