ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಏ. 13 ಭಾನುವಾರದಂದು ನಡೆಯಲಿರುವ ಶ್ರೀ ಮಹಾವಿಷ್ಣು ಯಾಗ ಮತ್ತು ಧಾರ್ಮಿಕ ಸಂಭೆಯ ಆಮಂತ್ರಣ ಪತ್ರಿಕೆ ಬಿಡುಗಡೆಯಾಯಿತು.
ಶ್ರೀ ದೇವಳದ ಅರ್ಚಕ ಗುರುಪ್ರಸಾದ್ ನೂರಿತ್ತಾಯರ ಪ್ರಾರ್ಥನೆಯೊಂದಿಗೆ ಆಡಳಿತ ಟ್ರಸ್ಟ್ ಉಪಾಧ್ಯಕ್ಷ ನಾರಾಯಣ ಗೌಡರು ಬಿಡುಗಡೆಗೊಳಿಸಿದರು .
ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ ಟ್ರಸ್ಟಿಗಳಾದ ಮನೋಹರ ಶೆಟ್ಟಿ, ನವೀನ , ರಾಮಣ್ಣಗೌಡ ಮೊದಲಾದವರು ಉಪಸ್ಥಿತರಿದ್ದರು.