ನೆಲ್ಯಾಡಿ: ಸುಬ್ರಹ್ಮಣ್ಯ – ಉಡುಪಿ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಮತ್ತು ಪೆರಿಯ ಶಾಂತಿ ನಡುವಿನ ರಸ್ತೆಯಲ್ಲಿ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು ಮಾ.19 ರಂದು (ಇಂದು) ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ರಸ್ತೆ ನಿರ್ಬಂಧದಿಂದಾಗಿ, ಈ ಮಾರ್ಗ ದಲ್ಲಿ ಸಂಚರಿಸುವ ವಾಹನಗಳು ಸುಬ್ರಹ್ಮಣ್ಯ ದಿಂದ ಧರ್ಮಸ್ಥಳಕ್ಕೆ ಹೋಗುವ ವಾಹನಗಳು ಕೈಕಂಬ ಗುಂಡ್ಯ ಪೆರಿಯಶಾಂತಿ ಮಾರ್ಗವನ್ನು ಬಳಸಬಹುದು. ಧರ್ಮಸ್ಥಳ ದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ವಾಹನಗಳು ಉದನೆ ಗುಂಡ್ಯ ಕೈಕಂಬ ಮಾರ್ಗವಾಗಿ ಸಂಚರಿಸಬಹುದು.
ಸಾರ್ವಜನಿಕರನ್ನು ಈ ಕಾಮಗಾರಿಗೆ ಸಹಕರಿಸುವಂತೆ ಪುತ್ತೂರು ಉಪವಿಭಾಗದ ಲೋಕೋಪಯೋಗಿ ಇಲಾಖೆ ಸಾರ್ವ ಜನಿಕ ಪ್ರಕಟಣೆ ಮೂಲಕ ವಿನಂತಿಸಿದೆ ಮತ್ತು ಪರ್ಯಾಯ ಮಾರ್ಗಗಳ ಬಳಕೆ ಯಿಂದ ಅನವಶ್ಯಕ ತೊಂದರೆಗಳನ್ನು ತಪ್ಪಿಸುವಂತೆ ಸೂಚಿಸಿದೆ.