ವಿಟ್ಲ : ಮೇಗಿನಪೇಟೆ ಚಂದ್ರ ಸ್ವಾಮೀ ಬಸದಿಯಲ್ಲಿ ನಡೆದ ಪಂಚ ಕಲ್ಯಾಣ ಮಹೋತ್ಸವ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶೌರ್ಯ ವಿಪತ್ತು ಘಟಕದಿಂದ ಸೇವಾಕಾರ್ಯ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕೇಪು,ಮಾಣಿ ವಲಯದ ಸೇವಪ್ರಾತಿನಿಧಿಗಳು, ಸಿ ಎಸ್ ಸಿ ಸೇವಾದಾರರು, ಶೌರ್ಯ ತಂಡದ ಸದಸ್ಯರು, ಹಾಗೂ ಒಕ್ಕೂಟದ ಪದಾಧಿಕಾರಿಗಳು ಒಟ್ಟು ಸೇರಿ 5 ನೇ ದಿನದ ಕಾರ್ಯಕ್ರಮಕ್ಕೆ ಪೂರಕವಾಗಿ ಕೆಲಸ ಕಾರ್ಯ ವನ್ನು ನೆರವೇರಿಸಿದ್ದಾರೆ.
ಈ ವೇಳೆ ಸಲಹೆ ನೀಡಿದ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್,ಯೋಜನಾಧಿಕಾರಿ ರಮೇಶ್, ಕೃಷಿ ಅಧಿಕಾರಿ ಚಿದಾನಂದ, ಕೇಪು ವಲಯ ಮೇಲ್ವಿಚಾರಕ ಜಗದೀಶ್, ಮಾಣಿ ವಲಯದ ಮೇಲ್ವಿಚಾರಕಿ ಆಶಾ ಪಾರ್ವತಿ ಉಪಸ್ಥಿತರಿದ್ದರು.