ಉಪ್ಪಿನಂಗಡಿ : ಇಲ್ಲಿನ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಐದನೇ ವಾರ್ಷಿಕ ಪ್ರತಿಷ್ಠಾ ದಿನೋತ್ಸವವು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳಲ್ಲಿ ಜರಗಿತು.
ಫೆಬ್ರವರಿ 6ರಂದು ಸುತ್ತಮುತ್ತಲಿನ ಗ್ರಾಮಗಳಿಂದ ಹೊರೆಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ, ಭಜನೆ ಮಹಾರಂಗಪೂಜೆ ಬಳಿಕ ನಾಗ ಮಾಣಿಕ್ಯ ನಾಟಕ ನಡೆಯಿತು. ಮರುದಿನ ಕೆಮ್ಮಿಂಜೆ ಬ್ರಹ್ಮ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಪಂಚ ವಿಂಶತಿ ಕಲಶಾಭಿಶೇಕ, ಪರಿವಾರ ದೈವಗಳಿಗೆ ಕಲಶ ತಂಬಿಲ, ಶ್ರೀ ಆಂಜನೇಯ ಯಕ್ಷಗಾನ ಮಹಿಳಾ ಸಂಘ ಬೊಳುವಾರು ಪುತ್ತೂರು ಇವರಿಂದ ಶ್ಯಮಂತಕ ಮಣಿ ತಾಳಮದ್ದಳೆ, ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.
ಆಡಳಿತ ಟ್ರಸ್ಟಿನ ಅಧ್ಯಕ್ಷ ಭಾಸ್ಕರ್ ಬಾರ್ಯ ಗುರಿಕಾರತ್ವದಲ್ಲಿ ಟ್ರ¸ïÖ ಮತ್ತು ಪದಾಧಿಕಾರಿಗಳು ಮತ್ತು ಒಂಭತ್ತು ಗುತ್ತಿನ ಮನೆಯವರ ಉಪಸ್ಥಿತಿಯಲ್ಲಿ ಗ್ರಾಮದೈವ ಪಂಜುರ್ಲಿಯ ನೇಮ ಜರಗಿತು.