ಸುಳ್ಯ: ಮುರುಳ್ಯ – ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಾಣಿಯೂರು ಶಾಖೆಯ ಸಲಹಾ ಸಮಿತಿ ಸದಸ್ಯೆ ಸುಧಾರಾಣಿ ದಿವಾಕರ ಗೌಡ ಕಡಿರಮೂಲೆ ಅವರನ್ನು ಕಾಣಿಯೂರು ಶಾಖೆಯ ಸಲಹಾ ಸಮಿತಿ ಸಭೆಯಲ್ಲಿ ಅಭಿನಂದಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉಪಾಧ್ಯಕ್ಷ ಯು. ಪಿ ರಾಮಕೃಷ್ಣ ಮಾತನಾಡಿ, ಸಹಕಾರ ಸಂಘದಲ್ಲಿ ಇನ್ನಷ್ಟು ಸ್ಥಾನವನ್ನು ಪಡೆದು ಅಭಿವೃದ್ಧಿ ಕೆಲಸವನ್ನು, ಸಾಧನೆಯನ್ನು ಮಾಡಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಣಿಯೂರು ಶಾಖೆಯ ಸಲಹಾ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ಪಟೇಲ್, ಎಂ. ಎನ್ ಗೌಡ, ಚಂದ್ರಶೇಖರ ಗೌಡ ಕೆ, ಸೀತಾರಾಮ ಗೌಡ ಮುಂಡಾಳ, ವೆಂಕಟ್ರಮಣ ಗೌಡ ಮರಕ್ಕಡ, ಶೇಷಪ್ಪ ಗೌಡ ಅಬಿರ, ಶೂರಪ್ಪ ಗೌಡ ಪಟ್ಟೆತನ, ನಿರ್ಮಲ ಕೇಶವ ಗೌಡ, ಸುಜಾತ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ ಕೆ., ಕಾಣಿಯೂರು ಶಾಖಾ ಮೆನೇಜರ್ ಪದ್ಮಶ್ರೀ ಮತ್ತು ಸಿಬ್ಬಂದಿ ಚೇತನ್ ಕುಮಾರ್ ಉಪಸ್ಥಿತರಿದ್ದರು.