ಕೋಡಿಂಬಾಡಿ ಗ್ರಾಪಂ ವ್ಯಾಪ್ತಿಯ ವಿಶೇಷ ಚೇತನರಿಗೆ ನೀರಿನ ಟ್ಯಾಂಕ್ ವಿತರಣೆ

ಪುತ್ತೂರು: ಗ್ರಾಮದ ಕಟ್ಟಕಡೇಯ ಬಡವನ ಮನೆಗೂ ಸರಕಾರದಿಂದ ಸೌಲಭ್ಯ ದೊರೆತಾಗ ಮಾತ್ರ ನಾವು ಜನಪ್ರತಿನಿಧಿಯಾಗಿ ಮಾಡುವ ಸೇವೆಗೆ ಗೌರವ ದೊರೆತ ತೃಪ್ತಿ ದೊರೆಯುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೋಡಿಂಬಾಡಿ ಗ್ರಾಪಂ ಕಚೇರಿಯಲ್ಲಿ ಗ್ರಾಪಂ ನಿಧಿಯಿಂದ ಗ್ರಾಮದ 8 ಮಂದಿ ವಿಶೇಷ ಚೇತನ ವ್ಯಕ್ತಿಗಳಿಗೆ ನೀರಿನ ಟ್ಯಾಂಕ್ ವಿತರಿಸಿ ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರಕರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ದೊರೆಯುತ್ತಿದೆ. ಇಂದು ಬಡವರ ಮೂರು ಹೊತ್ತಿನ ಊಟಕ್ಕೂ ಈ ಯೋಜನೆ ಸಹಕಾರಿಯಾಗಿದೆ. ಸಂಘದಿಂದ ಸಾಲ ಅಥವಾ ಕೈ ಸಾಲ ಪಡೆದು ಮನೆ ಕಟ್ಟಿಕೊಂಡ ಸಾವಿರಾರು ಬಡ ಕುಟುಂಬಗಳು ನಮ್ಮ ಕ್ಷೇತ್ರದಲ್ಲಿದೆ. ಅವರಿಗೆ ಸರಕಾರದಿಂದ ದೊರೆಯುವ ಗ್ಯಾರಂಟಿಯಿಂದಾಗಿ ದುಡಿದ ಹಣದಲ್ಲಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿದೆ. ಈ ಗ್ಯಾರಂಟಿ ಯೋಜನೆಯನ್ನು ತಂದ ಸರಕಾರವನ್ನು ಜನ ಎಂದಿಗೂ ಮರೆಯಬಾರದು ಎಂದು ಹೇಳಿದ ಶಾಸಕರು ಕೋಡಿಂಬಾಡಿ ಗ್ರಾಪಂ ಇಂದು ಮಾಡಿರುವ ಸಮಾಜಮುಖಿ ಕಾರ್ಯ ಎಲ್ಲಾ ಗ್ರಾಪಂಗಳಿಗೂ ಮಾದರಿಯಗಲಿ ಎಂದು ಹೇಳಿದರು. ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ಉಷಾ, ಜಗನ್ನಾಥ ಶೆಟ್ಟಿ ನಡುಮನೆ, ಕಾರ್ಯದರ್ಶಿ ಅಣ್ಣು, ನೋಡೆಲ್ ಅಧಿಕಾರಿ ಮೀರಾ, ವಿಕಲಚೇತನ ಸಿಬ್ಬಂದಿ ಲೀಲಾವತಿ ಉಪಸ್ಥಿತರಿದ್ದರು. ಪಿಡಿಒ ಶೈಲಜಾಭಟ್ ಸ್ವಾಗತಿಸಿದರು. ಸಿಬ್ಬಂದಿಗಳಾದ ಸುರೇಶ್ ನಾಯ್ಕ, ಸುರೇಶ ಕಾರ್ಯಕ್ರಮ ನಿರೂಪಿಸಿದರು.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top